2:09 PM Friday29 - March 2024
ಬ್ರೇಕಿಂಗ್ ನ್ಯೂಸ್
ನಂಜನಗೂಡು: ಕಳಲೆ ಜಾತ್ರಾ ಮಹೋತ್ಸವದಲ್ಲಿ ನಡೆದ ಅದ್ದೂರಿ ತೇರಡಿ ಉತ್ಸವ ಕಾಜೂರು ದರ್ಗಾಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ: ಚುನಾವಣಾ ಉಸ್ತುವಾರಿ ರಮಾನಾಥ… ವಿಶಾಖಪಟ್ಟಣದಿಂದ ತಂದ 6 ಕೆಜಿಗೂ ಅಧಿಕ ಗಾಂಜಾ ವಶ: ಆರೋಪಿ ಬಂಧನ; 9… ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್: ಸಚಿವ ತಂಗಡಗಿ ಹೇಳಿಕೆಗೆ ಶಾಸಕ ಹರೀಶ್ ಪೂಂಜ… ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ವಿಶೇಷ ಪೂಜೆ ಸಲ್ಲಿಕೆ; ಹೊಸಳಿಗಮ್ಮ… ಮಂಗಳೂರು: ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿ ಆಗಮಿಸಿದ ಡಾ. ಮಂಜುನಾಥ… ಜೆಡಿಎಸ್ ಸ್ಪರ್ಧಿಸಲಿರುವ 3 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ: ಮಂಡ್ಯದಿಂದ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್… ಮನೆಯಲ್ಲಿ ಅಕ್ರಮ ನಾಡ ಬಂದೂಕು: ಬಣಕಲ್ ಸಮೀಪದ ವ್ಯಕ್ತಿಯ ಬಂಧನ ಅಭಿವೃದ್ಧಿ ಮತ್ತು ಕಾಂಗ್ರೆಸ್- ಎರಡೂ ವಿರೋಧ ಪದಗಳು: ಬಿಜೆಪಿ ರಾಜ್ಯ ಪ್ರಕೋಷ್ಠ ಸಂಚಾಲಕ… ಲೋಕಸಭೆ ಚುನಾವಣೆ: ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ: ಹಿರಿಯ ಮುತ್ಸದ್ಧಿ ಜನಾರ್ದನ ಪೂಜಾರಿ…

ಇತ್ತೀಚಿನ ಸುದ್ದಿ

“ಎ2 ಒರಿಜಿನಲ್ಸ್” ಹೊಸ ಪ್ರಯೋಗ: ‘ಮನಸೆಲ್ಲಾ ನೀನೇ’  ಆಲ್ಬಂ ಹಾಡು ಬಿಡುಗಡೆ

31/03/2022, 21:34

ಬೆಂಗಳೂರು(reporterkarnataka.com): ಜಗತ್ತು ಡಿಜಿಟಲ್ ಯುಗಕ್ಕೆ ತನ್ನನ್ನು ತಾನು ಒಗ್ಗಿಕೊಳ್ಳುತ್ತಿದ್ದಂತೆ  ಜಗತ್ತಿನ ವಿದ್ಯಮಾನ ಬೆರಳ ತುದಿಗೆ ಬಂದು ನಿಂತಿದೆ. ಹೀಗಾಗಿ ಸಾಮಾಜಿಕ ಜಾಲ ತಾಣ ಮತ್ತು ವೆಬ್ ದುನಿಯಾದೇ ಹವಾ. 

ಈಗಿನ ಆಧುನಿಕ ಕಾಲಕ್ಕೆ ತಕ್ಕಂತೆ ಹೊಸ ಪ್ರಯೋಗಗಳಿಗೆ ಒಗ್ಗಿಕೊಳ್ಳಲು”ಎ2 ಒರಿಜಿನಲ್ಸ್” ಹೊಸ ಪ್ರಯೋಗಕ್ಕೆ ಮುಂದಾಗಿದೆ. ಹೊಸ ಆಡಿಯೋ ವೀಡಿಯೋ ದೃಶ್ಯವೈಭವಗಳು ಜನರನ್ನು ತಲುಪುತ್ತಿರುವ ಕಾಲಘಟ್ಟದಲ್ಲಿ “ಎ2 ಒರಿಜಿನಲ್ಸ್” ಸಂಸ್ಥೆ ಅದಕ್ಕೆಲ್ಲ ಭಿನ್ನ ಎನ್ನುವಂತೆ ಹೊಸ ಆಡಿಯೋ ಆಲ್ಬಂ ಹೊರತಂದಿದೆ. “ಎ2 ಸಂಸ್ಥೆ” ನಿರ್ಮಾಣ ಮಾಡಿರುವ ಮನಸೆಲ್ಲಾ ನೀನೇ ಎಂಬ ಆಲ್ಬಂ ಹಾಡಿನ ದೃಶ್ಯ ವೈಭವ ಎ2 ಒರಿಜಿನಲ್ಸ್ ನಲ್ಲಿ ಮಾರ್ಚ್ 31 ರಂದು ಲೋಕಾರ್ಪಣೆಯಾಯಿತು.

ಆಡಿಯೋ ವಿಡಿಯೋ ಆಲ್ಬಂ ಅನ್ನು ಯುವ ಪ್ರತಿಭೆ ವಿಸ್ಮಯ ಜಗ ನಿರ್ದೇಶನದ ಜೊತೆಗೆ, ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಆಲ್ಬಂನ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಪೂರ್ತಿ ವೀಡಿಯೋ ಎ2 ಎಂಟರ್ ಟೈನ್ ಮೆಂಟ್ ಯುಟ್ಯೂಬ್ ಚಾನಲ್ ಬಿಡುಗಡೆಯಾಗಿದ್ದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ ಎನ್ನುತ್ತಾರೆ ಎ2 ಒರಿಜಿನಲ್ಸ್ ಎಕ್ಸಿಕ್ಯೂಟಿವ್ ನ ಪ್ರವೀಣ್‌ ಟಿ ಪಿ.

ಮನಸೆಲ್ಲಾ ನೀನೇ ಆಡಿಯೋ ಆಲ್ಬಂನಲ್ಲಿ ಧನುಷ್ ಹಾಗೂ ರೋಷಿಣಿ ಪ್ರಕಾಶ್ ಮುಖ್ಯಭೂಮಿಕೆಯಲ್ಲಿದ್ದಾರೆ.  ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಲಾವಿದರು. ನಟನೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ.  ಪ್ರತೀ ಫ್ರೇಮ್ ನಲ್ಲೂ ಸಾಕಷ್ಟು ಸ್ಕೋರ್ ಮಾಡಿದ್ದಾರೆ. ವಿಶೇಷ ಪಾತ್ರದಲ್ಲಿ ಪುಟಾಣಿ ಧ್ರುತಿ ಕಾಣಿಸಿಕೊಂಡಿದ್ದು, ಆ ಪಾತ್ರ ಯಾವುದು ಎನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ಆಲ್ಬಂ ಗೀತೆಯನ್ನು ಸತ್ಯ ರಾಧಾಕೃಷ್ಣ ಸುಮಧುರವಾಗಿ ಹಾಡಿದ್ದಾರೆ.  ಸತೀಶ್ ರಾಜೇಂದ್ರ ಛಾಯಾಗ್ರಹಣ, ರಿಯಾಸ್ ಸಂಕಲನವಿದೆ.  

ಎ2 ಒರಿಜಿನಲ್ಸ್ ನಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಪ್ರಯತ್ನಕ್ಕೆ ಸಂಸ್ಥೆ ಮುಂದಾಗಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕಿ ವಾಣಿ ಪ್ರಸಾದ್‌ ತಿಳಿಸಿದರು. ಎ2 ಎಂಟರ್ ಟೈನ್ ಮೆಂಟ್ ಯುಟ್ಯೂಬ್ ಚಾನಲ್ ನಲ್ಲಿ  ಮಾರ್ಚ್ 31, ಬೆಳಗ್ಗೆ 11ಗಂಟೆಗೆ ಬಿಡುಗಡೆಯಾಗಿದ್ದು, ಇದನ್ನ ಈ ಲಿಂಕ್‌ ಬಳಸಿ ನೋಡಿಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು