ಇತ್ತೀಚಿನ ಸುದ್ದಿ
ಈ ನೀರು ಕುಡಿಯೋ ಬದಲು ವಿಷ ಕುಡಿಯೋದು ಒಳ್ಳೆದು: ಚಿಕ್ಕಮಗಳೂರು 3ನೇ ವಾರ್ಡ್ ಜನರ ಆಕ್ರೋಶದ ನುಡಿ
30/11/2021, 14:21
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಈ ನೀರು ಕುಡಿಯೋ ಬದಲು ವಿಷ ಕುಡಿಯೋದು ಒಳ್ಳೆದು. ಇದನ್ನು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ, ಹೊಸ ಹೊಸ ಖಾಯಿಲೆ ಕೂಡ ಬರಬಹುದು.
ಇದು ಚಿಕ್ಕಮಗಳೂರು ನಗರದ ಶಂಕರಪುರ ಮೂರನೇ ವಾರ್ಡಿನಲ್ಲಿ ಜನರ ಆಕ್ರೋಶ ನುಡಿ.ಕುಡಿಯೋ ನೀರಲ್ಲಿ ಹುಳ-ಕಸ ಕಡ್ಡಿ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ಎಲೆಕ್ಷನ್ ಅನೌನ್ಸ್ ಆಗಿದೆ, ನಾವ್ ಸತ್ರೆ ಓಟ್ ಹಾಕೋರ್ಯಾರು ಎಂದು ನಾಗರಿಕರು ನಗರಸಭೆಯ ಜನಪ್ರತಿನಿಧಿಗಳನ್ನು ಪ್ರಶ್ನಿಸಿದ್ದಾರೆ.
ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ, ಹೊಸ-ಹೊಸ ಖಾಯಿಲೆ ಬರುತ್ತೆ. ಈ ನೀರು ಕುಡಿಯೋ ಬದಲು ವಿಷ ಕುಡಿಯೋದು ಒಳ್ಳೆದು.
ನೀರು ಶುದ್ದೀಕರಿಸಿದ್ರೂ ಕುಡಿಯಲು ಯೋಗ್ಯವಾಗಿಲ್ಲ. ನಗರಸಭೆಗೆ ಮನವಿ ಮಾಡಿದ್ರು ಯಾವುದೇ ಪ್ರಯೋಜನವಿಲ್ಲ ಎಂದು ಸ್ಥಳಿಯರ ಆರೋಪಿಸಿದ್ದಾರೆ.