2:04 PM Tuesday19 - March 2024
ಬ್ರೇಕಿಂಗ್ ನ್ಯೂಸ್
ಲೋಕಸಭಾ ಚುಣಾವಣೆ: ಸಭೆ, ಸಮಾರಂಭ, ಚುನಾವಣಾ ಪ್ರಚಾರಗಳಿಗೆ ಪೂರ್ವಾನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ ದೇವರಮನೆಯಲ್ಲಿ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು ಮೂಡಿಗೆರೆ: ಇಬ್ಬರು ಬಿಜೆಪಿ ಮುಖಂಡರ ಅಮಾನತು ಆದೇಶ ವಾಪಸ್; ಭಿನ್ನಮತ ಉಪಶಮನಕ್ಕೆ ಹಿರಿಯ… ಭಾರತದ ಕಾರು ಮಾಲೀಕರ ನೆಚ್ಚಿನ ಸೂಪರ್ ಆ್ಯಪ್ ಪಾರ್ಕ್+: ಪ್ರಸ್ತುತ ದೇಶದಲ್ಲಿ 1.5… ಕರ್ನಾಟಕವನ್ನು ಲೂಟಿಕೋರರಿಂದ ರಕ್ಷಿಸುತ್ತೇನೆ: ಕಲಬುರಗಿ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ಮೋದಿ ಘೋಷಣೆ ದೇಶದ ಗದ್ದುಗೆಗೆ ಬಿಗ್ ಫೈಟ್: ಮತ್ತೊಮ್ಮೆ ಮೋದಿ- ರಾಹುಲ್ ಮುಖಾಮುಖಿ; ರಾಜ್ಯದಲ್ಲಿ ಏ.26… ಸಂಸತ್ ಚುನಾವಣೆಯ ದಿನಾಂಕ ನಾಳೆ ಪ್ರಕಟ: ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಲಿದ್ದಾರೆ ಚೀಫ್ ಎಲೆಕ್ಷನ್… ಕಡೂರಿಗೆ ಆಗಮಿಸಿದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ: ಮೊಮ್ಮಗ ಪ್ರಜ್ವಲ್ ಪರ… ಹಿಂದುತ್ವ ಮತ್ತು ಅಭಿವೃದ್ಧಿಗೆ ನನ್ನ ಆದ್ಯತೆ: ದ.ಕ. ಲೋಕಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ… ಮಂಗಳೂರು: ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅಮಾನತಿಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಇತ್ತೀಚಿನ ಸುದ್ದಿ

ಎತ್ತಿನಭುಜ: ಮೀಸಲು ಅರಣ್ಯದಲ್ಲಿ  ಮ್ಯಾರಥಾನ್ ಗೆ ಪರಿಸರಪ್ರಿಯರ ವಿರೋಧ

27/11/2021, 09:15

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

The Malnad Ultra ಎಂಬ ಸಂಸ್ಥೆಯು ಮೂಡಿಗೆರೆಯ ಎತ್ತಿನಭುಜ ಗುಡ್ಡದ ವ್ಯಾಪ್ತಿಯಲ್ಲಿ ಇಂದಿನಿಂದ ಮ್ಯಾರಥಾನ್ ಅನ್ನು ಆಯೋಜಿಸಿದೆ. 


ಆದರೆ ಈ ಮ್ಯಾರಥಾನ್ ಪಶ್ಚಿಮಘಟ್ಟ ಮೀಸಲು ಅರಣ್ಯದಲ್ಲಿ ಹಾದು ಹೋಗುವುದರಿಂದ ಪರಿಸರ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವ ಉದ್ದೇಶಕ್ಕೆ, ಯಾರ ಉದ್ಧಾರಕ್ಕೆ  ಮಾಹಿತಿಯಂತೆ 500 ಜನರ ಭಾಗವಹಿಸಲಿರುವ  ಮ್ಯಾರಥಾನ್ ಇದು. ಇಷ್ಟೊಂದು ಜನ ಒಟ್ಟಿಗೇ ಚಟುವಟಿಕೆ ಪ್ರಾರಂಭಿಸಿದರೆ ಪರಿಸರ ಸೂಕ್ಷ್ಮ ಪ್ರದೇಶದ ಗತಿಯೇನು !? ಇವರ ಶೌಚ ಕ್ರಿಯೆಯಿಂದಾಗಿ ಅಲ್ಲಿನ ಜಲಮೂಲಗಳು ಕುಲಗೆಟ್ಟು ಹೋಗುವುದಕ್ಕೆ ಯಾರು ಹೊಣೆ ? ಜಿಲ್ಲಾಡಡಳಿತ, ಅರಣ್ಯ ಇಲಾಖೆ ಹೇಗೆ ಇಂತಹ Mega Event ಗೆ ಅನುಮತಿ ನೀಡಿತು.? ನಮ್ಮ ಪ್ರಶ್ನೆಗಳಿಗೆ ಜಿಲ್ಲಾ ಉಪಸಂರಕ್ಷಣಾಧಿಕಾರಿಗಳು ಬರೀ ಹಾರಿಕೆಯ ಉತ್ತರವನ್ನಷ್ಟೇ ನೀಡುತ್ತಿದ್ದಾರೆ. 


ಈ ಮ್ಯಾರಥಾನ್ ನ  ಸಂಚಾಲಕರೇ ಮಾಹಿತಿ ನೀಡಿರುವಂತೆ ಮ್ಯಾರಥಾನ್ ನಲ್ಲಿ ಭಾಗವಹಿಸುವವರಿಗೆ ತಲಾ 3000-3500 ರುಪಾಯಿ  ನಿಗದಿಪಡಿಸಲಾಗಿದೆ. 3000*400 ಜನ ಎಂದುಕೊಂಡರೂ 12 ಲಕ್ಷವಾಯಿತು. ಯಾವುದೋ ಖಾಸಗಿ ಈವೆಂಟ್ ಸಂಸ್ಥೆಗೆ ಲಾಭ ಮಾಡಿಕೊಳ್ಳುವ ಸಲುವಾಗಿ ಜಿಲ್ಲಾಡಳಿತ ಪಶ್ಚಿಮಘಟ್ಟ ವನ್ನು ಧಾರೆಯೆರೆಯಿತಾ ? ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ

ಇತ್ತೀಚಿನ ಸುದ್ದಿ

ಜಾಹೀರಾತು