11:56 AM Saturday20 - April 2024
ಬ್ರೇಕಿಂಗ್ ನ್ಯೂಸ್
ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ

ಇತ್ತೀಚಿನ ಸುದ್ದಿ

ವೇದಾವತಿ ನದಿಯ ಚೆಕ್ ಡ್ಯಾಂ: ಈಜಲು  ಬಂದ 5 ಮಂದಿಯಲ್ಲಿ ಇಬ್ಬರು ನೀರುಪಾಲು

25/11/2021, 09:05

ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಕುಟುಂಬದೊಂದಿಗೆ ಖಷಿಯಾಗಿ ಹರಿಯುವ ನೀರಿನಲ್ಲಿ ಇಳಿದ ಇಬ್ಬರು ನೀರಿನಲ್ಲಿ ಕಾಣೆಯಾದ ಘಟನೆ ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ.

ತಾಲೂಕಿನ ಹಾಲಗೊಂಡನಹಳ್ಳಿ ಗ್ರಾಮದ ಬುಧವಾರ 5 ಗಂಟೆ ಸುಮಾರಿನಲ್ಲಿ ಚಳ್ಳಕೆರೆ ನಗರದ  ಐದು ಜನ ಕುಟುಂಬ

ಸದಸ್ಯರೊಂದಿಗೆ ವೇದಾವತಿ ನದಿಯ ಚೆಕ್ ಡ್ಯಾಂ ನೀರಿನಲ್ಲಿ ಇಳಿದು ಖಷಿ ಪಡುತ್ತಿರುವ ಸಂದರ್ಭದಲ್ಲಿ  ಮೋನಿಷ ನೀರಿನಲ್ಲಿ ಮುಳುಗಿದಾಗ ರಕ್ಷಣೆ ಮಾಡಲು ಹೋಗಿ ಇಬ್ಬರು ಕುಟುಂದ ಸದಸ್ಯರ ಕಣ್ಣುಮುಂದೆಯೇ ಸೋಮಶೇಖರ್(37) ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೋನಿಷ(8) ಇಬ್ಬರು ನೀರಿನಲ್ಲಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಸುದ್ದಿ ಸ್ಥಳಕ್ಕೆ ಡಿವೈಎಸ್‍ಪಿ ಕೆ.ವಿ.ಶ್ರೀಧರ್, ತಹಶೀಲ್ದಾರ್ ಎನ್.ರಘುಮೂರ್ತಿ, ಸಿಪಿಐ ಜೆ.ಎಸ್.ತಿಪ್ಪೇಸ್ವಾಮಿ, ಎಎಸ್‍ಐ ರವೀಂದ್ರ, ಅಗ್ನಿಶಾಮಕ ಠಾಣಾಧಿಕಾರಿ ಜಯಣ್ಣ ಹಾಗೂ ಸಿಬ್ಬಂದಿಗಳು ನೀರಿಗಿಳಿದು  ಕಾರ್ಯಾಚರಣೆ ನಡೆಸಿದರು ಪತ್ತೆಯಾಗದ ಕಾರಣ ಗುರುವಾರ ಬೆಳಗ್ಗೆ6 ಗಂಟೆಗೆ ಮತ್ತೆ ಶವಗಳ ಹುಡುಕಾಟ ಕಾರ್ಯಾಚರಣೆ ನಡೆಸಲಾಗುವುದು ಎಂದು ಡಿವೈಎಸ್ಪಿ ಕೆ.ವಿ.ಶ್ರೀಧರ್ ಮಾಹಿತಿ ತಿಳಿಸದ್ದಾರೆ.
ಚಳ್ಳಕೆರೆ ನಗರದ ಜತೆಯಲ್ಲಿದ್ದವರು ಕಾವ್ಯಪ್ರಕಾಶ್, ನೀರಿನಲ್ಲಿ ಕಾಣೆಯಾದ ಮೋನಿಷಳ ತಾಯಿ ಉಮಾದೇವಿ ಶಂಕಲಿಂಗಪ್ಪ, ನೀರಿನಲ್ಲಿ ಕಾಣೆಯಾದ ಸೋಮಶೇಖರ್ ಪತ್ನಿ ಸುಮಂಗಳ ಇದ್ದರು

ಇತ್ತೀಚಿನ ಸುದ್ದಿ

ಜಾಹೀರಾತು