12:55 PM Saturday20 - April 2024
ಬ್ರೇಕಿಂಗ್ ನ್ಯೂಸ್
ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ

ಇತ್ತೀಚಿನ ಸುದ್ದಿ

ಚಳ್ಳಕೆರೆ ದೊಡ್ಡಉಳ್ಳಾರ್ತಿ ಜಾತ್ರೆ  ಸಮಾಪನ: ಗೌರಿದೇವಿ ವಿಸರ್ಜನೆ; ಮಕ್ಕಳಿಗಾಗಿ ಹೂ ತೊಟ್ಟಿಲ ಸೇವೆ

23/11/2021, 19:16

ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿಯ ಶ್ರೀಗೌರಿದೇವಿ ಜಾತ್ರೆ ಸಡಗರ ಸಂಭ್ರಮದಿಂದ ನಡೆದಿದ್ದು, ಗೌರಿದೇವಿ ವಿಸರ್ಜನೆ ಕಾರ್ಯ ನೆರವೇರಿತು.

ಗೌರಿ ದೇವಿಯ ಮೂರ್ತಿಗೆ ದೀಪಾಲಂಕರದಿಂದ ಶೃಂಗಾರಗೊಳಿಸಿ ದೊಡ್ಡ ಹಬ್ಬದಂತೆ ಆಚರಣೆ ಮಾಡಿದ್ದು ಒಂದು ವಿಶೇಷವಾಗಿತ್ತು. ಗ್ರಾಮದ ಗಂಡನ ಮನೆಯಾದ ವೀರಭದ್ರಸ್ವಾಮಿ ದೇವಾಲಯದಿಂದ ಸಂಪ್ರದಾಯದಂತೆ ಗೌರಿದೇವಿಯನ್ನು ಬೆಳಗಿನ ಜಾವ ಸುಮಾಎಉ 3.30ರಲ್ಲಿ ಎಡೆಮುಡಿ ಮೇಲೆ ಗೌರಿಯನ್ನು ಮೆರವಣಿಗೆಯ ಮೂಲಕ ತವರು ಮನೆಗೆ ಕರೆ ತರಲಾಯಿತು.ಊರಿನಲ್ಲಿ ಗುಡಿ ನಿರ್ಮಿಸಿ ಜಾತ್ರೆ ಮಾಡುತ್ತಿದ್ದರು ಎಂಬ ಪ್ರತೀತಿ ಇದೆ.ನಾವು ಸಹ ಹಿರಿಯರ ಆಶಯದಂತೆ ಮುಂದುವರೆಸಿಕೊಂಡು ಬರಲಾಗಿದೆ ಎಂಬುದು ಭಕ್ತರ ನಂಬಿಕೆ.

ಗೌರಿದೇವಿ ಜಾತ್ರೆ ಮೂಲತಃ ಹೆಣ್ಣು ಮಕ್ಕಳ ಹಬ್ಬ. ದೇವಿಗೆ ಪೂಜಾ ಕೈಂಕರ್ಯ ನಡೆಸುವವರೆಲ್ಲ ಒಪ್ಪತ್ತು ಮಾತ್ರ ಊಟ ಮಾಡಬೇಕು. ಆಚರಣೆಯಂತೆ ವಿದಿವಿಧಾನದಂತೆ ಸಮಂಗಲಿಯರು ಮಧ್ಯೆ ರಾತ್ರಿ ತಣ್ಣಿರಿನ ಸ್ನಾನ ಬಣ್ಣಬಣ್ಣದ ಮಡಿ ಸೀರೆಗಳನ್ನು ಉಟ್ಟುಕೊಂಡು ಮಂಜಾನೆ ದೇವಿಗೆ ಮಹಾ ಮಂಗಳಾರತಿ ಸಮರ್ಪಿಸಿದರು.

ದಿನವೆಲ್ಲ ಉಪವಾಸವಿರುವ ಪುರುಷರು ನಂತರ ರಾತ್ರಿ  ಚಳಿಯನ್ನು ಲೆಕ್ಕಿಸದೆ ತಣ್ಣಿರಿನಲ್ಲಿ ಸ್ನಾನಮಾಡಿ ದೇವಿಯನ್ನು ತವರು ಮನೆಯಿಂದ ಕರೆ ತರುವ ಸಂದರ್ಭದಲ್ಲಿ ಡಿಂಡುರುಳು ಸೇವೆ ಅರ್ಪಿಸಿದರು. ಇವರಿಗೆ ಮಹಿಳೆಯರು ಆರತಿ ಹಿಡಿಯುವ ಮೂಲಕ ಪ್ರೋತ್ಸಾಹ ನೀಡಿ ಚಳಿಯಲ್ಲು ಜಾತ್ರೆ ಕಳೆಕಟ್ಟುವಂತೆ ಮಾಡಿದರು.

ಕಂಕಣ ಬಲ ಕೂಡಿ ಬರಲು, ಒಳ್ಳೆಯ ಪತಿ ದೊರೆಯಲೆಂದು ಯುವತಿಯರು ದಿಂಡುರುಳು ಮತ್ತು ಆರತಿ ಹಿಡಿಯುವ ಹರಕೆ ಅರ್ಪಿಸಿದರು. ಮಕ್ಕಳ ಫಲ ಲಭಿಸಲಿ ಎಂದು ಮಕ್ಕಳಿಲ್ಲದವರು ಹೂವಿನ ತೊಟ್ಟಿಲ ಹರಕೆ ತೀರಿಸಿ ದೇವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಪುರೈಸು ಎಂಬ ಭಾವ ಮಹಿಳೆಯರಲ್ಲಿ ಎದ್ದು ಕಾಣುತ್ತಿತ್ತು. 

ಇತ್ತೀಚಿನ ಸುದ್ದಿ

ಜಾಹೀರಾತು