ಇತ್ತೀಚಿನ ಸುದ್ದಿ
ತರೀಕೆರೆ: ಸಿಡಿಲು ಬಡಿದು ಧಗಧಗನೆ ಉರಿದು ಭಸ್ಮವಾದ ಟ್ರಾಕ್ಟರ್, ಶೆಡ್: 25 ಲಕ್ಷ ರೂ. ನಷ್ಟ
16/11/2021, 09:51
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಜಿಲ್ಲೆಯ ತರೀಕೆರೆ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಟ್ರ್ಯಾಕ್ಟರ್ ಶೆಡ್ ಭಸ್ಮವಾದ ಘಟನೆ ನಡೆದಿದೆ.
ಸಿಡಿಲು ಹೊಡೆದ ಪರಿಣಾಮ ಕರುಣಾ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಶೆಡ್ ಧಗಧಗನೆ ಉರಿದು ಹೋಯಿತು. ಟ್ರ್ಯಾಕ್ಟರ್, ಅಡಿಕೆ ಮೆಷಿನ್, 15 ಕ್ವಿಂಟಾಲ್ ಅಡಿಕೆ ಬೆಂಕಿಗಾಹುತಿ ಸಿಡಿಲಾಘಾತದಿಂದ ಬರೋಬ್ಬರಿ 25 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.