3:34 AM Friday19 - April 2024
ಬ್ರೇಕಿಂಗ್ ನ್ಯೂಸ್
ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ

ಇತ್ತೀಚಿನ ಸುದ್ದಿ

ಪ್ರತಿ ದಿನವೂ ಮಕ್ಕಳ ದಿನವೇ: ಚಿಣ್ಣರ ಕಲರವ ಎಲ್ಲೆಡೆ ಕೇಳುತ್ತಿರಲಿಲ್ಲ

14/11/2021, 09:38

ಮಕ್ಕಳಿರಲಿ ಮನೆ ತುಂಬಾ… ಹರಡುತ್ತಿರಲಿ ನಗು ಹೃದಯ ತುಂಬಾ.. 

ಮನೆ ತುಂಬಾ ಓಡಾಡುವ ಮಕ್ಕಳ ಕಿಲ ಕಿಲ ನಗುವಿನ ಶಬ್ದ , ಆಗಾಗ ಕಿವಿಗೆ ಅಪ್ಪಳಿಸುವಂತೆ ಕೇಳುವ ಕಿರುಚಾಟ ,ಕೂಗಾಟ, ಮುದ್ದುಮುದ್ದು ಮಾತುಗಳನ್ನು ಕೇಳುವಾಗ ಆಗುವಂತಹ ಸಂತೋಷ ಹೇಳಲು ಅಸಾಧ್ಯ.


ಮಗುವಿನ ಸುಂದರ ಮೊಗ ನೋಡುವಾಗ ಮನಸ್ಸಿಗೆ ಆಗುವಂತಹ ಆನಂದ ವರ್ಣಿಸಲಸದಳ.. 


ಇಂತಹ ಮುದ್ದು ಮನಸಿನ ಮಗು ಮನೆಬಿಟ್ಟು ಶಾಲೆಗೆ ಸೇರಿದ ನಂತರ ಶಾಲೆಯಲ್ಲಿ  ಪಡೆಯುವ ಶಿಕ್ಷಣವು ಮಗುವಿನ ಜೀವನ ಗತಿಯನ್ನೇ ಬದಲಾಯಿಸುತ್ತದೆ.

ಶಾಲೆಯಲ್ಲಿ ಗೆಳೆಯರೊಂದಿಗೆ ಸೇರಿ ಸಹಕಾರ , ಸಹನೆ , ಸಹೋದರತೆ, ಶಿಕ್ಷಕರೊಂದಿಗೆ ಗುರು ಹಿರಿಯರೊಂದಿಗೆ ಗೌರವದಿಂದ ವರ್ತಿಸುವ ವಿಧಾನ ಎಲ್ಲವನ್ನೂ ಶಿಕ್ಷಣದಿಂದ ಕಲಿಯುತ್ತಾರೆ.

ನವೆಂಬರ್ 14 ಬಂತೆಂದರೆ ಮಕ್ಕಳ ಮನದಲ್ಲಿ ಸಂಭ್ರಮ ಮನೆ ಮಾಡುತ್ತದೆ. ಶಿಕ್ಷಕರು ತರಗತಿಗೆ ಹೋಗುವಾಗ ತಮ್ಮ ಮನದಿಂಗಿತವನ್ನು , ಆಶಯವನ್ನು ವ್ಯಕ್ತಪಡಿಸುತ್ತಾರೆ. ಮಕ್ಕಳ ದಿನಾಚರಣೆ ಆಚರಿಸುವ ಬಗ್ಗೆ ಕೇಳುತ್ತಾರೆ. ಮಕ್ಕಳ ದಿನಾಚರಣೆಯಂದು ಇಡೀ ದಿನ ಸಂತೋಷದಿಂದ ಕಳೆಯುತ್ತಾರೆ. ಆ ದಿನ ಮಕ್ಕಳ ಹಬ್ಬ , ಚಿಣ್ಣರ ಚಿಲಿಪಿಲಿ ಹೊಸ ಬಟ್ಟೆ ಹಾಕಿಕೊಂಡು  ಶಾಲೆಗೆ ಬರುವ ಸಂಭ್ರಮದ ಗುಂಗಿನಲ್ಲಿರುತ್ತಾರೆ ,

ಶಾಲೆಯಲ್ಲಿ ಆಟೋಟ ಸ್ಪರ್ಧೆಗಳು ಹಾಡು , ನೃತ್ಯ ಮಾಡುವುದರಿಂದ  ಬಹುಮಾನ ಪಡೆಯುವ ಮೂಲಕ ಸಂಭ್ರಮಿಸುತ್ತಾರೆ. ಎಲ್ಲರೊಂದಿಗೆ ಖುಷಿಯಿಂದ ಬೆರೆತು ಕಲಿತು ಸಂಭ್ರಮವನ್ನು ಆಚರಿಸುತ್ತಾರೆ.. ಈ ಸಂಭ್ರಮ ಕೇವಲ ಮಕ್ಕಳ ದಿನಾಚರಣೆಯಂದು ಮಾತ್ರ ಇರದೆ ಪ್ರತಿದಿನವೂ ಪ್ರತಿಕ್ಷಣವು ಇರಲಿ ಎಂಬುದೇ ನಮ್ಮ ಆಶಯ.

✍️

ಇತ್ತೀಚಿನ ಸುದ್ದಿ

ಜಾಹೀರಾತು