ಇತ್ತೀಚಿನ ಸುದ್ದಿ
ನಂದಳಿಕೆ: ಸಂಬಂಧಿಕರು ಮನೆಗೆ ಬಂದಿದ್ದ ಬಾಳೆಹೊನ್ನೂರಿನ ಯುವಕ ನೀರಿನ ಸುಳಿಗೆ ಸಿಲುಕಿ ದಾರುಣ ಸಾವು
27/10/2021, 08:35
ಕಾರ್ಕಳ(reporterkarnataka.com): ನಡೆದುಕೊಂಡು ಹೋಗುವಾಗ ಹಳ್ಳಕ್ಕೆ ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಆರ್ಯಾಡ್ ಮಾನಬೆಟ್ಟು ಎಂಬಲ್ಲಿ ನಡೆದಿದೆ.
ಪ್ರವೀಣ್ ( 19 ) ಮೃತ ಯುವಕನಾಗಿದ್ದು,ಮೂಲತಃ ಬಾಳೆಹೊನ್ನೂರು ನಿವಾಸಿ. ಇವರು ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ಬಂದಿದ್ದು ಮಂಗಳವಾರ ಮಧ್ಯಾಹ್ನ ಮನೆಯ ಸಮೀಪದ ತೋಡಿಗೆ ಮನೆಯವರೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ಆಳವಾದ ಹಳ್ಳದ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.