ಇತ್ತೀಚಿನ ಸುದ್ದಿ
ಭಾರಿ ಗಾತ್ರದ ಸಮುದ್ರದಲೆ: ಮಲ್ಪೆ ಬೀಚ್ ನಲ್ಲಿ ಸ್ನಾನ ಮಾಡುತ್ತಿದ್ದ ಕೊಪ್ಪಳದ 3 ಮಂದಿ ಪ್ರವಾಸಿಗರ ರಕ್ಷಣೆ
14/10/2021, 23:53
ಉಡುಪಿ(reporterkarnataka.com) : ವಾಯುಭಾರ ಕುಸಿತ ಪರಿಣಾಮದಿಂದ ಸಮುದ್ರ ಅಲೆಗಳ ಎತ್ತರವು ಹೆಚ್ಚುತ್ತಿದ್ದು, ಸಮುದ್ರದಲ್ಲಿ ಸ್ನಾನ ಮಾಡುವುದು ಈಜುವುದು ಅಪಾಯಕಾರಿಯಾಗಿ ಪರಿಣಮಿಸಿದೆ. 3 ಮಂದಿ ಪ್ರವಾಸಿಗರನ್ನು ಬಚಾವ್ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದ ಮೂರು ಜನ ಪ್ರವಾಸಿಗರು ನೀರಿನಲ್ಲಿ ಮುಳುವಾಗ ಮಲ್ಪೆ ಬೀಚಿನ ಲೈಫ್ ಗಾರ್ಡ್ಸ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ಇಂದು ಸಂಜೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಬನಕಟ್ಟಿ ಹಳ್ಳಿಯ ನಿವಾಸಿಗಳಾದ ಪವನ್ ಮದಿಲ, ಚೇತನ್ ಪ್ರಿಯದರ್ಶಿನಿ ಎಂಬವರನ್ನು ಮಲ್ಪೆಯ ಲೈಫ್ ಗಾರ್ಡ್ಸ್ ರಕ್ಷಿಸಿದ್ದಾರೆ ಎನ್ನಲಾಗಿದೆ. ಮೂರು ಜನ ಸಮುದ್ರದಲ್ಲಿ ಸ್ನಾನಕ್ಕೆಂದು ನೀರಿಗೆ ಇಳಿದಿದ್ದರು.