7:09 PM Tuesday23 - April 2024
ಬ್ರೇಕಿಂಗ್ ನ್ಯೂಸ್
ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ… ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ ಚುನಾವಣೆ 60 ದಿನಗಳ ಕಾಲ ನಡೆಯುತ್ತಿರುವುದು ಅನುಮಾನಾಸ್ಪದ: ಮಾಜಿ ಸಿಎಂ… ಸಿದ್ದರಾಮಯ್ಯ ಸರಕಾರದಲ್ಲಿ ಬದುಕಿನ ಗ್ಯಾರಂಟಿ ಕಳೆದುಕೊಂಡ ಕನ್ನಡಿಗರು: ಶಾಸಕ ಡಾ. ವೈ ಭರತ್… ನಮ್ಮ ಕೆಲಸವೇ ಅಪಪ್ರಚಾರ ನಡೆಸುವವರಿಗೆ ತಕ್ಕ ಉತ್ತರ: ಸರಪಾಡಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ… ಗಾಳಿ ಮಳೆಗೆ ಮರ ಬಿದ್ದು ತಂಡಾದ ಪವರ್ ಲೈನ್: ವಿದ್ಯುತ್ ಶಾಕ್ ಹೊಡೆದು… ಕೊಲ್ಯದಿಂದ ಅಬ್ಬಕ್ಕ ರಾಣಿ ಸರ್ಕಲ್‌ ವರೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ… 91ರ ಹರೆಯದ ಮಾಜಿ ಪ್ರಧಾನಿ ದೇವೇಗೌಡರು ಮೋದಿ ಗೆಲ್ಲಿಸಿ ಎನ್ನುತ್ತಿದ್ದಾರೆ; ದಿನಬಳಕೆ ವಸ್ತುಗಳ…

ಇತ್ತೀಚಿನ ಸುದ್ದಿ

2 ಸಾವಿರ ವರ್ಷ ಇತಿಹಾಸವುಳ್ಳ ಮಖಣಾಪುರದ ಶ್ರೀ ಗುರು ಸೋಮಲಿಂಗೇಶ್ವರ ದೇವಸ್ಥಾನ: 10 ತಲೆಮಾರಿನ ಮಠ ಪರಂಪರೆ

14/10/2021, 13:52

ಭೀಮಣ್ಣ ಪೂಜಾರಿ ಶಿರನಾಳ ವಿಜಯಪುರ

info.reporterkarnataka@gmail.com

ರಾಜ್ಯದ ಪ್ರಸಿದ್ಧ ಶಿವ ದೇವಾಲಯಗಳಲ್ಲ ವಿಜಯಪುರ ಜಿಲ್ಲೆಯ ಮಖಣಾಪುರದ ಶ್ರೀ ಗುರು ಸೋಮಲಿಂಗೇಶ್ವರ ದೇವಸ್ಥಾನ ಒಂದು. ಈ ದೇಗುಲಕ್ಕೆ ಸುಮಾರು 2 ಸಾವಿರ ಇತಿಹಾಸವಿದೆ. ಭಕ್ತರ ಇಷ್ಟಾರ್ಥ ನೆರವೇರಿಸುವ ಸೋಮಲಿಂಗ ಎಂದೇ ಇದು ನಾಡಿನುದ್ಧಗಲಕ್ಕೂ ಪ್ರಸಿದ್ಧಿ ಪಡೆದಿದೆ.

ದೇವಾಲಯದಲ್ಲಿ ಸೋಮೇಶ್ವರನಿಗೆ ನಿತ್ಯ ಪೂಜೆ ನಡೆಯುತ್ತದೆ. ಭಕ್ತರಿಗೆ ಅನ್ನದಾಸೋಹ ನೆರವೇರುತ್ತಿದೆ. ಮಠದಲ್ಲಿ ಭಕ್ತರಿಗೆ ಸ್ವಾಮೀಜಿ ಪ್ರತಿ ದಿನ ಸಂಜೆ ದರ್ಶನ ಕೊಡುತ್ತಾರೆ. ಹರಕೆ ಹೊತ್ತ ಭಕ್ತರು ಇಲ್ಲಿಗೆ ಬಂದು ಗುರುಗಳ ಪಾದಪೂಜೆ ನೆರವೇರಿಸುತ್ತಾರೆ.ದೇಗುಲ ಮಠ ಪರಂಪರೆಯನ್ನು ಹೊಂದಿದೆ.


10 ತಲೆಮಾರುಗಳ ಇತಿಹಾಸವಿರುವ ಮಠ ಪರಂಪರೆಯನ್ನು ದೇಗುಲ ಹೊಂದಿದೆ. ಈಗಿನ 11ನೇ ತಲೆಮಾರಿನ ಶ್ರೀ ದೇವೇಂದ್ರ ಒಡೆಯಾರ್ ಸ್ವಾಮೀಜಿ ಅವರು ಗುರುಪೀಠವನ್ನು ಅಲಂಕರಿಸಿದ್ದಾರೆ. 10 ತಲೆಮಾರಿನಿಂದ ಮಠದಲ್ಲಿ ನಡೆದುಕೊಂಡು ಬರುತ್ತಿರುವ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಶ್ರೀ ದೇವೇಂದ್ರ ಒಡೆಯಾರ್ ಸ್ವಾಮೀಜಿ ಚಾಚು ತಪ್ಪದೆ ಪಾಲಿಸಿ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಂಸಾರ ಪೀಠವಾದ ಇಲ್ಲಿನ ಮಠದ ದೇವೇಂದ್ರ ಒಡೆಯಾರ್ ಸ್ವಾಮೀಜಿ ದೇವರ ಮತ್ತು ಭಕ್ತರ ಇಷ್ಟಾರ್ಥಕ್ಕನುಗುಣವಾಗಿ ಮಠವನ್ನು ಮುನ್ನಡೆಸುತ್ತಿದ್ದಾರೆ.


ಸ್ವಾಮೀಜಿಯವರು ಸೋಮಲಿಂಗೇಶ್ವರನ ಅಪ್ಪಣೆಯಂತೆ ಅನಾಥರಿಗೆ ಆಶ್ರಮ ನಿರ್ಮಿಸಿದ್ದಾರೆ. ಅದರ ಜತೆಗೆ ಶಿವನ ಬೃಹತ್ ಲಿಂಗವನ್ನು ಪ್ರತಿಷ್ಠಾಪಿಸುವ ಸಂಕಲ್ಪ ಹೊಂದಿದ್ದಾರೆ. ಸುಮಾರು ಒಂದು ಎರಕೆ ಪ್ರದೇಶದಲ್ಲಿ 108 ಅಡಿ ಎತ್ತರದ ಬೃಹತ್ ಶಿವಲಿಂಗ ತಲೆ ಎತ್ತಿ ಇಡೀ ವಿಜಯಪುರ ಜಿಲ್ಲೆ ಮಾತ್ರವೇಕೆ ಇಡೀ ರಾಜ್ಯವನ್ನು ಪಾವನಗೊಳಿಸಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು