9:26 PM Tuesday23 - April 2024
ಬ್ರೇಕಿಂಗ್ ನ್ಯೂಸ್
ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ… ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ ಚುನಾವಣೆ 60 ದಿನಗಳ ಕಾಲ ನಡೆಯುತ್ತಿರುವುದು ಅನುಮಾನಾಸ್ಪದ: ಮಾಜಿ ಸಿಎಂ… ಸಿದ್ದರಾಮಯ್ಯ ಸರಕಾರದಲ್ಲಿ ಬದುಕಿನ ಗ್ಯಾರಂಟಿ ಕಳೆದುಕೊಂಡ ಕನ್ನಡಿಗರು: ಶಾಸಕ ಡಾ. ವೈ ಭರತ್… ನಮ್ಮ ಕೆಲಸವೇ ಅಪಪ್ರಚಾರ ನಡೆಸುವವರಿಗೆ ತಕ್ಕ ಉತ್ತರ: ಸರಪಾಡಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ… ಗಾಳಿ ಮಳೆಗೆ ಮರ ಬಿದ್ದು ತಂಡಾದ ಪವರ್ ಲೈನ್: ವಿದ್ಯುತ್ ಶಾಕ್ ಹೊಡೆದು… ಕೊಲ್ಯದಿಂದ ಅಬ್ಬಕ್ಕ ರಾಣಿ ಸರ್ಕಲ್‌ ವರೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ… 91ರ ಹರೆಯದ ಮಾಜಿ ಪ್ರಧಾನಿ ದೇವೇಗೌಡರು ಮೋದಿ ಗೆಲ್ಲಿಸಿ ಎನ್ನುತ್ತಿದ್ದಾರೆ; ದಿನಬಳಕೆ ವಸ್ತುಗಳ…

ಇತ್ತೀಚಿನ ಸುದ್ದಿ

ಅನಾಥ, ಬಡ ಮಕ್ಕಳಿಗೆ ನಿತ್ಯ ಅನ್ನದಾನ: ಮಹಾನ್ ಸಾಧಕ ಮಸ್ಕಿಯ ಡಾ. ಶಿವಶರಣಪ್ಪ ಇತ್ಲಿ

03/10/2021, 16:47

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್ ನಲ್ಲಿರುವ ಆಶಾಕಿರಣ ಅನಾಥ ಮತ್ತು ಬಡಮಕ್ಕಳ ಆಶ್ರಮದಲ್ಲಿ ನಿತ್ಯ ಅನ್ನದಾನ ಜತೆಗೆ ಶಿಕ್ಷಣಕ್ಕೆ ಸಾಥ್ ನೀಡುತ್ತಿರುವ ಡಾ. ಶಿವಶರಣಪ್ಪ ಕುಟುಂಬವು ಇದೀಗ ಮಸ್ಕಿ ಭಾಗದಲ್ಲಿ ಡಾ. ಶಿವಶರಣಪ್ಪ ಫೌಂಡೇಶನ್ ಚಾಲನೆ ನೀಡಿದೆ.


ಮೂಲತಃ ರಾಯಚೂರಿನವರಾದ ಡಾ. ಶಿವಶರಣಪ್ಪ ಕುಟುಂಬವು 50 ವರ್ಷಗಳ ಹಿಂದೆ ಮಸ್ಕಿಗೆ ಆಗಮಿಸಿತ್ತು. ಮಸ್ಕಿಯಲ್ಲಿ ಆಸ್ಪತ್ರೆ ತೆರೆದು ಡಾ. ಇತ್ಲಿ ಅವರು ವೈದ್ಯಕೀಯ ನೆರವಿನ ಜತೆಗೆ ಸಮಾಜಮುಖಿ ಕೆಲಸ ಮಾಡಲಾರಂಭಿಸಿದರು. ಡಾ. ಇತ್ಲಿ ಅವರ ಪುಣ್ಯ ಕಾರ್ಯಕ್ಕೆ ಅವರ ಕುಟುಂಬ ಕೈಜೋಡಿಸಿತು. ಇದೀಗ ಡಾ. ಶಿವಶರಣಪ್ಪ ಫೌಂಡೇಶನ್ ಎಂಬ ಸಂಸ್ಥೆ ತಲೆ ಎತ್ತಿ ನಿಂತಿದೆ. ಡಾ. ಇತ್ಲಿ ಅವರು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಘನತೆ ಮೆರೆದಿದ್ದಾರೆ. ಇಲ್ಲಿ ಬಡವರು, ಅನಾಥರು, ದಿಕ್ಕು ಇಲ್ಲದವರು ಡಾ. ಇತ್ಲಿ ಅವರನ್ನು ದೇವರ ತರಹ ಪೂಜಿಸುತ್ತಾರೆ. ಸಿಂಧನೂರಿನ ಪಿಡಬ್ಲ್ಯೂಡಿಕ್ಯಾಂಪ್ ನಲ್ಲಿರುವ ಆಶಾಕಿರಣ ಅನಾಥ ಮತ್ತು ಬಡಮಕ್ಕಳಿಗೆ ಅನ್ನದಾನ ಮಾಡುತ್ತಿದ್ದರು. ಜತೆಗೆ ಅವರ ಶಿಕ್ಷಣಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು