6:47 AM Wednesday24 - April 2024
ಬ್ರೇಕಿಂಗ್ ನ್ಯೂಸ್
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ… ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ ಚುನಾವಣೆ 60 ದಿನಗಳ ಕಾಲ ನಡೆಯುತ್ತಿರುವುದು ಅನುಮಾನಾಸ್ಪದ: ಮಾಜಿ ಸಿಎಂ… ಸಿದ್ದರಾಮಯ್ಯ ಸರಕಾರದಲ್ಲಿ ಬದುಕಿನ ಗ್ಯಾರಂಟಿ ಕಳೆದುಕೊಂಡ ಕನ್ನಡಿಗರು: ಶಾಸಕ ಡಾ. ವೈ ಭರತ್… ನಮ್ಮ ಕೆಲಸವೇ ಅಪಪ್ರಚಾರ ನಡೆಸುವವರಿಗೆ ತಕ್ಕ ಉತ್ತರ: ಸರಪಾಡಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ… ಗಾಳಿ ಮಳೆಗೆ ಮರ ಬಿದ್ದು ತಂಡಾದ ಪವರ್ ಲೈನ್: ವಿದ್ಯುತ್ ಶಾಕ್ ಹೊಡೆದು…

ಇತ್ತೀಚಿನ ಸುದ್ದಿ

ಲೇಖಕಿ, ಕವಯತ್ರಿ ಅಕ್ಷತಾರಾಜ್ ಪೆರ್ಲ ಅವರ “ಬೇಲಿ ಹಾಗೂ ಸಾಪೊದ ಕಣ್ಣ್” ತುಳು ನಾಟಕ ಕೃತಿ ಲೋಕಾರ್ಪಣೆ

30/09/2021, 23:04

ಮಂಗಳೂರು(ReporterKarnataka.com) : ಲೇಖಕಿ, ಕವಯತ್ರಿ, ಆಕಾಶವಾಣಿ ಉದ್ಘೋಶಕರಾದ ಅಕ್ಷತಾ ರಾಜ್ ಪೆರ್ಲ ಅವರ ಪ್ರಶಸ್ತಿ ವಿಜೇತ ‘ಬೇಲಿ’ ಹಾಗೂ ‘ಸಾಪೊದ ಕಣ್’ ನಾಟಕ ಕೃತಿಗಳನ್ನು ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಲೋಕಾರ್ಪಣೆಗೊಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ನಂದಾದೀಪ ಪ್ರಕಾಶನ ಕನ್ಯಾನ ಜಂಟಿಯಾಗಿ ಮಂಗಳೂರು ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಗುರುವಾರ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಈ ಸಂದರ್ಭ ಮಾತಾಡಿದ ಕುಲಪತಿಗಳು, ಸಾಹಿತ್ಯ ಬೆಳೆದಂತೆ ಭಾಷೆ ಬೆಳೆಯುತ್ತದೆ. ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ರಚನೆಯಾಗಬೇಕು, ಸಾಮಾಜಿಕ ಜಾಲತಾಣದಲ್ಲಿ ತುಳು ಭಾಷೆಯ ಬಳಕೆಯಾಗುತ್ತಿದೆ ಆದರೆ ಭಾಷೆಯ ದಾಖಲಾತಿಗೆ ಕೃತಿಗಳ ರಚನೆಯಾಗಬೇಕು ಎಂದ ಅವರು ನಾಟಕಗಳಲ್ಲಿ ಮಾನವೀಯತೆಗೆ ಒತ್ತು ನೀಡಿರುವುದು ಹಾಗೂ ಎರಡು ತುಳು ನಾಟಕಗಳನ್ನು ಪುಸ್ತಕ ರೂಪದಲ್ಲಿ ಬಿಡುಗಡೆಗೊಳಿಸಿದ ಲೇಖಕಿಯನ್ನು ಶ್ಲಾಘಿಸಿದರು.

ಮಂಗಳೂರು ವಿ.ವಿ ಯ ಬ್ರಹ್ಮಶ್ರೀ ನಾರಾಯಣಗುರು ಪೀಠದ ಸಂಯೋಜಕ ಡಾ.ಗಣೇಶ್ ಅಮೀನ್ ಸಂಕಮಾರ್, ಸೂಕ್ಷ್ಮವಾಗಿ ಲೋಕ ತಿದ್ದುವ ಶಕ್ತಿ ನಾಟಕಗಳಿಗಿದೆ, “ಪುರಾಣದ ಪಾತ್ರಗಳನ್ನು ಈಗಿನ ಸಾಮಾಜಿಕ ಪರಿಸ್ಥಿತಿಗೆ ಅನ್ವಯಿಸುವುದು ಸುಲಭದ ಮಾತಲ್ಲ. ಅದರಲ್ಲೂ ಸಾಹಿತಿಗಳು ನಿರ್ಲಕ್ಷಿಸಿರುವ ಶಿಖಂಡಿ ಪಾತ್ರವನ್ನು ಲೇಖಕಿ ಆರಿಸಿಕೊಂಡು ಅದನ್ನು ಬೆಳೆಸಿರುವುದು ಅದ್ಭುತ, ಮಂಗಳಮುಖಿಯರು ಲೋಕಕ್ಕೆ ಮಂಗಳ ತರುವವರು ಎಂಬುದನ್ನು ಲೇಖಕಿ ನಿರೂಪಿಸಿದ್ದಾರೆ ಎಂದು ಅವರು ತಿಳಿಸಿದರು.

ಕೃತಿಯನ್ನು ಪರಿಚಯಿಸಿದ ನ್ಯಾಯವಾದಿ ಹಾಗೂ ರಂಗನಿರ್ದೇಶಕ ಶಶಿರಾಜ್ ಕಾವೂರು, ಬೇಲಿ ಹಾಗೂ ಸಾಪೊದ ಕಣ್ಣ್ ನಾಟಕಗಳಲ್ಲಿ ನಾಟಕಕಾರನಿಗೆ ಇರಲೇಬೇಕಾದ ವಿವೇಚನಾಶಕ್ತಿ ಮತ್ತು ತರ್ಕವಿದೆ. ಸಣ್ಣ, ಚುರುಕಾದ, ಪರಿಣಾಮಕಾರಿ ನಿರೂಪಣೆ, ಜೊತೆಗೆ ಸಂಭಾಷಣೆಯಲ್ಲಿ ನಿರಂತರತೆಯಿದೆ. ಈ ನಾಟಕಗಳು ಆದಷ್ಟು ಬೇಗ ಬೇರೆ ಭಾಷೆಗೆ ತರ್ಜುಮೆಯಾದರೆ, ರಂಗ ಪ್ರಯೋಗವಾದರೆ ಒಳ್ಳೆಯದು, ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕಾಲೇಜ್‌ನ ಪ್ರಿನ್ಸಿಪಾಲ್ ಡಾ.ಅನುಸೂಯ ರೈ ಲೇಖಕಿ ಅಕ್ಷತಾ‌ರಾಜ್ ಪೆರ್ಲ ಅವರನ್ನು ಅಭಿನಂದಿಸಿದರು. ಎಂ.ಆರ್.ಪಿ.ಎಲ್ ಪ್ರಶಿಕ್ಷಣ ವಿಭಾಗದ ಉಪಮಹಾಪ್ರಬಂಧಕಿ ವೀಣಾ.ಟಿ.ಶೆಟ್ಟಿ, ರಾಮಕೃಷ್ಣ ಮಿಷನ್ ನ ‘ಸ್ವಚ್ಛ ಮನಸ್’ ರೂವಾರಿ ರಂಜನ್ ಬೆಳ್ಳರ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ತುಳುಪೀಠದ ಸಂಯೋಜಕ ಡಾ. ಮಾಧವ ಎಂ ಕೆ ಅತಿಥಿಗಳನ್ನು ಸ್ವಾಗತಿಸಿದರು. ಗೀತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು