9:53 AM Tuesday16 - April 2024
ಬ್ರೇಕಿಂಗ್ ನ್ಯೂಸ್
ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ… ಮಂಗಳೂರಿನಲ್ಲಿ ನಾಳೆ ‘ಇಂಡಿಯಾ’ ಘಟಕ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ‘ಬಿಜೆಪಿ… ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್‌ ಎಲ್ಲಿಗೆ ಹೋಯಿತು?; ಬಿಜೆಪಿ ನಾಯಕರು ಉತ್ತರಿಸಲಿ: ಮಾಜಿ… ಪ್ರಧಾನಿ ಮೋದಿ ರೋಡ್ ಶೋ: ಏರ್ ಪೋರ್ಟ್ ನಿಂದ ಲೇಡಿಹಿಲ್ ವರೆಗೆ ಎಸ್… ದ.ಕ.ಲೋಕಸಭೆ: ತಗ್ಗಿತೇ ಬಿಜೆಪಿ ಪ್ರಚಾರ?: ದಿನ ಕಳೆದಂತೆ ಸ್ಟ್ರಾಂಗ್ ಆಗುತ್ತಿದೆಯೇ ಪದ್ಮರಾಜ್ ಟೀಮ್… ಪೋಷಕರ ನಿರ್ಲಕ್ಷ್ಯ: ಏರ್ ಗನ್ ನಲ್ಲಿ ಶೂಟ್ ಮಾಡಿಕೊಂಡು 7 ವರ್ಷದ ಬಾಲಕ… ಬಾಳೆಹೊನ್ನೂರು ಭಾಗದಲ್ಲಿ ಭಾರೀ ವರ್ಷಧಾರೆ: ಕಾದ ನೆಲಕ್ಕೆ ತಂಪೆರಚಿದ ಮಳೆ; ಕೃಷಿಕರ ಮೊಗದಲ್ಲಿ… ಮುಂಬೈ ಬಂಟರ ಸಂಘದಲ್ಲಿ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ… ಕಾಡುಕೋಣ ದಾಳಿ: ಯುವ ರೈತ ಗಂಭೀರ ಗಾಯ; ಮಂಗಳೂರು ಆಸ್ಪತ್ರೆಗೆ ದಾಖಲು

ಇತ್ತೀಚಿನ ಸುದ್ದಿ

20 ವರ್ಷಗಳಿಂದ 40 ಕುಟುಂಬಗಳು ಅರ್ಜಿ ಸಲ್ಲಿಸಿದರೂ ಸಿಗದ ವಸತಿಭಾಗ್ಯ!: ಕೂಡ್ಲಿಗಿ ಅಂಬೇಡ್ಕರ್ ನಗರದ ನಿರಾಶ್ರಿತರ ಅರಣ್ಯರೋಧನಕ್ಕೆ ಕೊನೆ ಎಂದು?

26/09/2021, 10:22

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ,ಸೆ 24ರಂದು ಸುರಿದ ಮಳೆಯಿಂದಾಗಿ ಡಾ”ಬಿ.ಆರ್.ಅಂಬೇಡ್ಕರ ನಗರದ ಹಲವು ಗುಡಿಸಲ ನಿವಾಸಿಗಳು ಅಕ್ಷರಶಃ ನಿರಾಶ್ರಿತರಾಗಿದ್ದಾರೆ.

ಮಳೆ ಬಂತೆಂದರೆ ಇವರ ಬದುಕು ಬೀದಿ ಪಾಲಾಗುತ್ತದೆ. ವಸತಿಗಾಗಿ ಇಲ್ಲಿನ 40 ಕುಟುಂಬಗಳು 20 ವರ್ಷಗಳಿಂದ ಸರಕಾರಕ್ಕೆ ಅರ್ಜಿ ಹಾಕುತ್ತಲೇ ಬಂದಿದ್ದಾರೆ.

ಇಲ್ಲಿನ ನಿವಾಸಿಳು ಹತ್ತಾರು ವರ್ಷಗಳಿಂದ ಹೀಗೇ ನರಕ ಯಾತನೆ ಪಡುತ್ತಿದ್ದು,ಈ ನಿರಾಶ್ರಿತರ ಗೋಳು ಆಲಿಸೋರಿಲ್ಲ , ಸ್ಪಂದಿಸುವರಿಲ್ಲ. ಹಾಗಾಗಿ ಕುಟುಂಬಗಳು ಅಕ್ಷರಶಃನಿರಾಶ್ರಿತರಾಗಿದ್ದಾರೆ.

ಮಳೆ ಬಂದ ಸಂದರ್ಭದಲ್ಲಿ  ಕೂಡಲು ಸಹ ಸ್ಥಳವಿಲ್ಲದೇ ಪರದಾಡುವಂತಾಗಿದೆ, ಸುಮಾರು 20 ವರ್ಷಗಳಿಂದ 40 ಕುಟುಂಬಗಳು ವಸತಿಗಾಗಿ ಪ್ರತಿ ವರ್ಷ ಅರ್ಜಿ ಹಾಕಿದ್ದೇ ಹಾಕಿದ್ದು. ಎಲ್ಲ ಜನಪ್ರತಿನಿಧಿಗಳಿಗೆ  ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ಜನಪ್ರತಿನಿಧಿಗಳು ಯಾರೂ ಆಶ್ರಯ ನೀಡುವಲ್ಲಿ ಆಸಕ್ತಿ ತೋರಿಲ್ಲ. ಅವರು ಯಾವುದಕ್ಕೂ ಉಪಯೋಗವಾಗಿಲ್ಲ ಎನ್ನುತ್ತಾರೆ ನಿರಾಶ್ರಿತರು. ಹಲವು ಬಾರಿ ಶಾಸಕರನ್ನೊಳಗೊಂಡಂತೆ ಪ್ರಮುಖ ಜನಪ್ರತಿನಿಧಿಗಳಿಗೆ, ಮನವಿ ಮಾಡಿದರೂ ವಸತಿ ಕಲ್ಪಿಸಿಲ್ಲ ಎನ್ನುತ್ತಾರೆ ನಿರಾಶ್ರಿತರು. 

ನಮ್ಮ ಮುಖ್ಯವಾದ ಸಮಸ್ಯೆ ನಿವೇಶನ.ವಸತಿಗಳ ಬಗ್ಗೆ ಎಲ್ಲರ  ಹತ್ತಿರ ಅಂಗಾಲಾಚಿ ಹೇಳಿ ಬೇಡಿಕೊಂಡಿದ್ದು, ಪತ್ರಗಳ ಮೂಲಕ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. 

ನಿರಾಶ್ರಿತರ ಗೋಳು ಅರಣ್ಯ ರೋಧನವಾಗಿದೆ.  ಮಳೆ ಬಂದಾಗಲೆಲ್ಲ, ನಿಂತುಕೊಂಡೇ ಕಾಲಹರಣ ಮಾಡಬೇಕಿದೆ. ಕಾರಣ ತುರ್ತಾಗಿ ಮಳೆಗಾಲ ಮುಗಿಯೋವರೆ ಗಂಜಿಕೇಂದ್ರ ಪ್ರಾರಂಭಿಸಬೇಕಿದೆ.  ಇಲ್ಲಿ ಅವಿಭಕ್ತ ಕುಟುಂಬಗಳು, ಮಾಜಿ ದೇವದಾಸಿಯರು, ವಿಧವೆಯರು, ಅಂಗವಿಕಲರು ಕಡು ಬಡವರು ರೈತರಿದ್ದು, ಸ್ಥಳೀಯ ಆಡಳಿತ ಸರ್ಕಾರ ಅವರಿಗೆ ಕನಿಷ್ಠ ವಸತಿ ಕಲ್ಪಿಸುವಲ್ಲಿ ವಿಫಲವಾಗಿವೆ.

ಸರ್ಕಾರ ಎಸ್.ಸಿ ಗಳಿಗೆ ವಿಶೇಷ ಯೋಜನೆಗಳನ್ನು ಜಾರಿ ತಂದಿದೆಯಾದರೂ ಕೇವಲ ಲೆಕ್ಕ ಪತ್ರಕ್ಕೆ ಸೀಮಿತವಾಗಿವೆ. ಇವರಿಗೆ ಮಾತ್ರ  ಮೂಲಭೂತ ಸೌಕರ್ಯಗಳು ಗಗನ ಕುಸುಮವಾಗಿವೆ.

ಸ್ಥಳೀಯ ಜನಪ್ರತಿನಿಧಿಗಳು ಇವರನ್ನು ತಮ್ಮ ಸಂದರ್ಭದಲ್ಲಿ ಬಳಸಿಕೊಳ್ಳುತ್ತಾರೆ. ಇವರ ಹಿತಕ್ಕಾಗಿ ಕನಿಷ್ಠ ಸೌಕರ್ಯಗಳನ್ನು ಒದಗಿಸಿಲ್ಲ. ಈ ಮೂಲಕ ಅವರನ್ನು ವಂಚಿತರಾಗಿಸಿದ್ದಾರೆ. ಸುಮಾರು ವರ್ಷಗಳಿಂದ ಮಳೆಗಾಲದಲ್ಲಿ ಮಳೆ ಬಂದರೆ ಇಲ್ಲಿನ ನಿವಾಸಿಗಳು ಪಾಡು ಅದೋಗತಿಯಲ್ಲಿವೆ, ಸುಮಾರು 40 ಕುಟುಂಬಗಳು ಅರೆ ಬರೆ ಗುಡಿಸಿನಲ್ಲೇ ವಾಸ ಮಾಡುತ್ತಿವೆ. ಪ್ರತಿ ವರ್ಷ ಮಳೆಗಾಲ ಸಂದರ್ಭದಲ್ಲಿ  ಗುಡಿಸಲುಗಳು ನೀರಿನಿಂದಾವೃತವಾಗುತ್ತವೆ.

ಮನೆಗಳಲ್ಲಿ ನೀರು ತುಂಬಿ ಇಡಿ ರಾತ್ರಿ ಹಗಲು ಕಣ್ಣಗೆ ನಿದ್ದೆ  ಇಲ್ಲದೆ ತುಂಬಾ ನರಕ ಯಾತನೆ ಪಡುತ್ತಿದ್ದಾರೆ.

ಹಾಗೂ ಮಳೆ ಬಂದಿದ ದಿನಗಳಲ್ಲಿ ಕಾರಣ ಮಳೆಗಾಲದಲ್ಲಿ ನಿರಾಶ್ರಿತರಿಗೆ, ಸರ್ಕಾರ ತುರ್ತಾಗಿ ತಾತ್ಕಾಲಿಕ ಗಂಜಿ ಕೇಂದ್ರಗಳನ್ನು ತೆರೆದು ವಸತಿ ಸೌಲಭ್ಯ ಕಲ್ಪಸಬೇಕಿದೆ. 

ಶಾಸಕರು ಖಾಯಂ ವಸತಿ ಕಲ್ಪಿಸಬೇಕು; ಶಾಸಕ ಎಂ.ವೈ.ಗೋಪಾಲಕೃಷ್ಣರವರು ಶೀಘ್ರವೇ ಖುದ್ದಾಗಿ ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಬೇಕಿದೆ. ಈ ಮೂಲಕ ಅವರು ಜನಪರ ಕಾಳಜಿ ತೋರಬೇಕಿದೆ ಎನ್ನುತ್ತಾರೆ ದಲಿತ ಮುಖಂಡರು. ಶಾಸಕರು ರಾಜ್ಯ ಕಂಡ ಹಿರಿಯ ಪ್ರಭಾವಿ ಅನುಭವಿ ಶಾಸಕರಾಗಿದ್ದು, ಆಡಳಿತದಲ್ಲಿ ಸಾಕಷ್ಟು ಅನುಭವಿ ಹಾಗೂ ಪ್ರಭಾವಿಗಳಾಗಿದ್ದಾರೆ. ಶಾಸಕರಾದ ಎನ್.ವೈ.ಜಿರವರು ಮನಸ್ಸು ಮಾಡಿ ಶೀಘ್ರವೇ ನಿರಾಶ್ರಿತರಿಗೆ ಖಾಯಂ ವಸತಿ ಕಲ್ಪಿಸಿ,ಹತ್ತಾರು ವರ್ಷಗಳಿಂದ ಇವರು ಅನುಭವಿಸುತ್ತಿರುವ  ನರಕ ಯಾತನೆಯಿಂದ ನಿರಾಶ್ರಿತರನ್ನು ಪಾರುಮಾಡಲು ಸಾಧ್ಯ ಎಂದು ಸಂಘಟನೆಗಳ ಪದಾಧಿಕಾರಿಗಳು ಹೇಳುತ್ತಾರೆ. ತಾಲೂಕಾಡಳಿತ  ನಿರಾಶ್ರಿತ ಕುಟುಂಬಗಳನ್ನು ಗುರುತಿಸಿ,ಮಳೆ ಗಾಲ ಮುಗಿಯೋವರೆಗೆ ಅವರಿಗೆ ತುರ್ತಾಗಿ ವಸತಿಗಾಗಿ ಗಂಜಿ ಕೇಂದ್ರ ಆರಂಭಿಸಬೇಕಿದೆ,

 ಅವರಿಗೆ ವಸತಿ ಯೋಜನೆಯಡಿ ಶೀಘ್ರ ವಸತಿಗಳನ್ನು  ನೀಡುವಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಶಾಸಕರು ವಸತಿ ಕಲ್ಪಿಸುವ ಸಂದರ್ಭದಲ್ಲಿ ಈ ನಿರಾಶ್ರಿತರಿಗೇ ಮೊದಲು ನೀಡಬೆಕಿದೆ,ಈ ಮೂಲಕ ಶಾಸಕರು ತಮ್ಮ  ಜನಪರ ಕಾಳಜಿ ತೋರಬೇಕೆಂದು ದಲಿತ ಮುಖಂಡರು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ, ನಿರಾಶ್ರಿತರಿಗೆ ವಸತಿ ಕಲ್ಪಿಸಿ ದಲಿತರ ಹಿತಕಾಯಬೇಕಿದೆ ಎಂಬುದು ಪಟ್ಟಣದ ನಾಗರೀಕರ ಅಭಿಮತವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು