6:27 AM Saturday20 - April 2024
ಬ್ರೇಕಿಂಗ್ ನ್ಯೂಸ್
ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ

ಇತ್ತೀಚಿನ ಸುದ್ದಿ

ಶಿರನಾಳ: ಸೆ. 18ರಂದು ಶ್ರೀ ಕೋಂತಕುಮಾರ ವೀರ ಮಲಕಾರಸಿದ್ದ ಸಿದ್ದಾಂತ ನಾಟಕ 

17/09/2021, 09:15

ಭೀಮಣ್ಣ ಪೂಜಾರಿ ಶಿರನಾಳ ವಿಜಯಪುರ
info.reporterkarnataka@gmail.com

ವಿಜಯಪುರ ಶಿರನಾಳದ ಶ್ಯಾಮರಸಿದ್ದೇಶ್ವರ ಗಜಾನನ ತರುಣ ಸಂಘ ಆಶ್ರಯದಲ್ಲಿ ಶ್ರೀ ಕೋಂತ ಕುಮಾರ ವೀರ ಮಲಕಾರ ಸಿದ್ದ ಸಿದ್ದಾಂತ ನಾಟಕ ಶ್ಯಾಮರ ಸಿದ್ದೇಶ್ವರ ದೇವಸ್ಥಾನದ ಎದುರುಗಡೆ ಸೆ. 18ರಂದು ಸಂಜೆ 8 ಗಂಟೆಗೆ ವಿಶೇಷ ಪೂಜೆಯೊಂದಿಗೆ ಜರುಗಲಿದೆ.

ಮುಮ್ಮೇಟ್ಟಗುಡ್ಡ ಶ್ರೀ ಬನಸಿದ್ಧ ಮಹಾರಾಜ ಅವರ ಸಾನಿಧ್ಯದಲ್ಲಿ ನಾಗಠಾಣ ಮಾಜಿ ಶಾಸಕ ವಿಠ್ಠಲ ದೋ. ಕಟಕದೊಂಡ ಉದ್ಘಾಟಿಸುವರು. ಮಖಣಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಚವ್ಹಾಣ ಅಧ್ಯಕ್ಷತೆ ವಹಿಸುವರು. ವಿಜಯಪುರ ಜಿಪಂ ನಿಕಟಪೂರ್ವ ಅಧ್ಯಕ್ಷೆ ಸುಜಾತಾ ಸೋ. ಕಳ್ಳಿಮನಿ ಹಾಗೂ ಬಬಲೇಶ್ವರ ಪಿಎಸ್ ಐ ಸೋಮನ ಗೌಡ್ರು ಜ್ಯೋತಿ ಬೆಳಗಿಸುವರು. 

ವಿಜಯಪುರ ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಪ್ಪ ಗೋ. ದಳವಾಯಿ ಹಾಗೂ ವಿಜಯಪುರ ತಾಪಂ ನಿಕಟಪೂರ್ವ ಅಧ್ಯಕ್ಷ ಕಾಳಪ್ಪ ಬಾ. ಬೆಳ್ಳುಂಡಗಿ ಗಜಾನನ ಫೋಟೋ ಪೂಜೆ ನೆರವೇರಿಸುವರು.

ವಿಜಯಪುರ ಎಪಿಎಂಸಿ ಮಾಜಿ ಸದಸ್ಯ ಸಿದ್ದಣ್ಣ ಸಕ್ರಿ, ಮಖಣಾಪುರ ಪಿಕೆಪಿಎಸ್ ಉಪಾಧ್ಯಕ್ಷ ಪೂಜಪ್ಪ ಮಾ. ಪೂಜಾರಿ ರಂಗಪೂಜೆ ನೆರವೇರಿಸುವರು. ವಿಜಯಪುರ ಬಂಜಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎಲ್. ಚವ್ಹಾಣ, ವಿಜಯಪುರ ತಾಪಂ ನಿಕಟಪೂರ್ವ ಉಪಾಧ್ಯಕ್ಷ ಪಿಂಟು ಗೋ ರಾಠೋಡ ಮಿಂಚು ಹಾರಿಸುವರು. ಮಖಣಾಪುರ ಗ್ರಾಪಂ ಉಪಾಧ್ಯಕ್ಷ ಧನಸಿಂಗ್ ಚವ್ಹಾಣ ಬಲೂನು ಹಾರಿಸುವರು.

ಮುಖ್ಯ ಅತಿಥಿಗಳಾಗಿ ಖ್ಯಾತ ವಾಗ್ಮಿ ಮೋಹನ ಮೇಟಿ, ಪೊಲೀಸ್ ಇಲಾಖೆಯ ದುಂಡಪ್ಪ ಥಂಬದ, ಶಿರನಾಳ ಗ್ರಾಪಂ ಸದಸ್ಯ ಬೆಳ್ಳೋಗಸಿದ್ಧ ಶಿ. ಪೂಜಾರಿ, ಮಖಣಾಪುರ ಎಲ್ ಟಿ2 ಸದಸ್ಯ ಪ್ರಕಾಶ ಮೋ. ಚವ್ಹಾಣ, ಶಿರನಾಳ ಗ್ರಾಪಂ ಸದಸ್ಯ ಡಾ. ವಿಜಯ ಕುಮಾರ್ ಸೋ. ಬಗಲಿ, ಶಿರನಾಳ ಗ್ರಾಪಂ ಸದಸ್ಯ ಕಲ್ಲಪ್ಪ ಸಿ. ತಿಕೋಟಿ, ಶಿರನಾಳ ಗ್ರಾಪಂ ಸದಸ್ಯರಾದ ಗಂಗಾಬಾಯಿ ಪಾ. ಲೋಖಂಡೆ, ಮಹಾದೇವಿ ಸು. ಹಳ್ಳಿ ಹಾಗೂ ಕೊಂದನ ಸಿ. ಸಯದ ಭಾಗವಹಿಸುವರು.

ಇತ್ತೀಚಿನ ಸುದ್ದಿ

ಜಾಹೀರಾತು