12:31 AM Thursday18 - April 2024
ಬ್ರೇಕಿಂಗ್ ನ್ಯೂಸ್
ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ…

ಇತ್ತೀಚಿನ ಸುದ್ದಿ

ಅಂತರಗಂಗೆಯಲ್ಲಿ ಹೊಸ ದ್ಯಾವಮ್ಮ ಮೂರ್ತಿ  ಪ್ರತಿಷ್ಠಾಪನೆ: ಗ್ರಾಮಸ್ಥರಿಂದ ಭವ್ಯ ಮೆರವಣಿಗೆ

26/08/2021, 10:45

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ತಾಲೂಕಿನ ಹಿರೇ ಅಂತರಗಂಗೆ ಗ್ರಾಮದಲ್ಲಿ ದ್ಯಾಮಮ್ಮ ಹೊಸ ಮೂರ್ತಿಯನ್ನು ಇಲಕಲ್ಲದಿಂದ ಬಾರಿ ವಿಜ್ರಂಭಣೆಯಿಂದ ಕಳಸ ಕನ್ನಡಿ, ಭಜನೆ ಬಾಜಿ ಡೊಳ್ಳು ಸಡಗರ ಸಂಭ್ರಮದಿಂದ ಅಂತರಗಂಗೆಗೆ ತರಲಾಯಿತು.

ಸುತ್ತಮುತ್ತಲ ಗ್ರಾಮಗಳಾದ ಮ್ಯಾದರಾಳ ಹಟ್ಟಿ , ಮೆದಿಕಿನಾಳ, ಬೈಲ್ ಗುಡ್ಡ, ನಾಗರಬೆಂಚಿ, ಅಂತರಗಂಗೆ ತಾಂಡಾ ಗ್ರಾಮಸ್ಥರಿಂದ ಟ್ರ್ಯಾಕ್ಟರ್ ನಲ್ಲಿ ಭವ್ಯ ಮೆರವಣಿಗೆ ಮೂಲಕ ಜೈಕಾರ ಹಾಕುತ್ತಾ ದ್ಯಾಮಮ್ಮ ಮೂರ್ತಿಯನ್ನು ತರಲಾಯಿತು.
ದ್ಯಾಮಮ್ಮ ದೇವಿಗೆ ಪಾರ್ವತಮ್ಮ ಕಾವಲಿ ಅವರ ಪೂಜಾರಿಯಾಗಿದ್ದು, ಅವರು ನಿಧನ ಬಳಿಕ ಅವರ ಕುಟುಂಬದವರ ಸೊಸೆ ಗುಡಿ ಪೂಜೆ ಪೂಜಾರಿ ವ್ಯವಸ್ಥೆಯ ನೋಡಿಕೊಂಡು ಬರುತ್ತಿದ್ದಾರೆ. ದೂರದ ಊರಾದ ಬಳ್ಳಾರಿ, ಸಿರುಗುಂಪ, ದಢೆಸುಗುರ್,ಮುದುಗಲ್,ಲಿಂಗಸುಗೂರು ಮುಂತಾದ ಕಡೆಗಳಿಂದ ಭಕ್ತರು ದ್ಯಾಮಮ್ಮ ಗುಡಿಗೆ ದರ್ಶನ ಮಾಡಲು ಆಗಮಿಸುತ್ತಾರೆ. ಕುಷ್ಟಗಿ ಶಾಸಕರು ಅಮರೇಗೌಡ ಪಾಟೀಲ್ ಬಯ್ಯಪೂರ್ ಅನುದಾನದಲ್ಲಿ ಗುಡಿ ಕಟ್ಟಡ ನಿರ್ಮಿಸಲಾಗಿದೆ. ಮಾಜಿ ಶಾಸಕ ಪ್ರತಾಪ ಗೌಡರು ಅನುದಾನ ಕೊಟ್ಟಿದ್ದರು. 

ಮಂಗಳಾರತಿ, ಭಜನೆ, ಡೊಳ್ಳು ಕುಣಿತದೊಂದಿಗೆ ಅಮ್ಮನನ್ನು ಗುಡಿ ಒಳಗೆ ಕರೆತರಲಾಯಿತು. ಭಕ್ತರು ಸುತ್ತಮುತ್ತಲಿನ ದರ್ಶನ ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಗುರಪ್ಪ ಗೋಮರ್ಸಿ, ವೀರೇಶ್ ಚಿಕ್ಕ ಅಂತರಗಂಗೆ ಗವಿಯಪ್ಪ ಗೌಡ, ದುರ್ಗಣ್ಣ ಕುರ್ಲಿ,ಈರಣ್ಣ ಕುರ್ಲಿ , ವಾಲ್ಮೀಕಿ ಸಮಾಜ ಯುವ ಮಿತ್ರರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು