3:16 PM Tuesday16 - April 2024
ಬ್ರೇಕಿಂಗ್ ನ್ಯೂಸ್
ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ… ಮಂಗಳೂರಿನಲ್ಲಿ ನಾಳೆ ‘ಇಂಡಿಯಾ’ ಘಟಕ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ‘ಬಿಜೆಪಿ… ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್‌ ಎಲ್ಲಿಗೆ ಹೋಯಿತು?; ಬಿಜೆಪಿ ನಾಯಕರು ಉತ್ತರಿಸಲಿ: ಮಾಜಿ… ಪ್ರಧಾನಿ ಮೋದಿ ರೋಡ್ ಶೋ: ಏರ್ ಪೋರ್ಟ್ ನಿಂದ ಲೇಡಿಹಿಲ್ ವರೆಗೆ ಎಸ್… ದ.ಕ.ಲೋಕಸಭೆ: ತಗ್ಗಿತೇ ಬಿಜೆಪಿ ಪ್ರಚಾರ?: ದಿನ ಕಳೆದಂತೆ ಸ್ಟ್ರಾಂಗ್ ಆಗುತ್ತಿದೆಯೇ ಪದ್ಮರಾಜ್ ಟೀಮ್… ಪೋಷಕರ ನಿರ್ಲಕ್ಷ್ಯ: ಏರ್ ಗನ್ ನಲ್ಲಿ ಶೂಟ್ ಮಾಡಿಕೊಂಡು 7 ವರ್ಷದ ಬಾಲಕ… ಬಾಳೆಹೊನ್ನೂರು ಭಾಗದಲ್ಲಿ ಭಾರೀ ವರ್ಷಧಾರೆ: ಕಾದ ನೆಲಕ್ಕೆ ತಂಪೆರಚಿದ ಮಳೆ; ಕೃಷಿಕರ ಮೊಗದಲ್ಲಿ… ಮುಂಬೈ ಬಂಟರ ಸಂಘದಲ್ಲಿ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ…

ಇತ್ತೀಚಿನ ಸುದ್ದಿ

ಶಿರಸಿಯ ಕಾಶಿನಾಥ್ ನಾಯ್ಕ್ ಅವರನ್ನು ಭೇಟಿಯಾದ ಚಿನ್ನದ ಹುಡುಗ ನೀರಜ್ ಚೋಪ್ರಾ : ಕನ್ನಡಿಗನನ್ನು ಗುರು ಅಲ್ಲ ಎಂದವರಿಗೆ ಶಿಷ್ಯನಿಂದಲೇ ಉತ್ತರ.!

25/08/2021, 00:35

ಶಿರಸಿ(ReporterKarnataka.com)

ಟೋಕಿಯೋ ಒಲಂಪಿಕ್ಸ್​​ನ ಜಾವೆಲಿನ್ ತ್ರೋದಲ್ಲಿ ಚಿನ್ನದ ಪದಕ ಗಳಿಸಿ ದೇಶದ ಕೀರ್ತಿ ಹೆಚ್ಚಿಸಿದ ನೀರಜ್​ ಚೋಪ್ರಾ ತಮ್ಮ ಮಾಜಿ ಕೋಚ್​ ಕನ್ನಡಿಗ ಕಾಶಿನಾಥ್ ಅವರನ್ನು ಭೇಟಿಯಾಗಿ ತನ್ನ ಸಮಯ ಕಳೆದಿದ್ದಾರೆ.


ಕಾಶಿನಾಥ್ ಅವರ ಪುಣೆಯ ಮನೆಗೆ ಭೇಟಿ ನೀಡಿ ಕುಟುಂಬದೊಂದಿಗೆ ಸೇರಿ ಸಮಯ ಕಳೆದ ನೀರಜ್ ಕಾಶಿನಾಥ್ ಅವರ ಗುರುವಲ್ಲ ಎಂದವರಿಗೆ ಉತ್ತರ ನೀಡಿದ್ದಾರೆ.

ಟೋಕಿಯೋ ಒಲಂಪಿಕ್ಸ್​ನಲ್ಲಿ ನೀರಜ್​ ಚೋಪ್ರಾ ಬಂಗಾರದ ಪದಕ ಗೆಲ್ಲುತ್ತಿದ್ದಂತೆ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬೆಂಗಳೆ ಗ್ರಾಮದ ಕಾಶೀನಾಥ ನಾಯ್ಕ ಹೆಸರು ಪ್ರಖ್ಯಾತಿಗೊಂಡಿತು. ನೀರಜ್​ ಚೋಪ್ರಾಗೆ ಕಾಶಿನಾಥ್​ ಕೂಡ ಈ ಹಿಂದೆ ತರಬೇತಿ ನೀಡಿದ್ದಾಗಿ ತಿಳಿಸಿದ್ದು, ಅವರೊಂದಿಗಿನ ಒಡನಾಟವನ್ನು ಕೂಡ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು.

ಚಿನ್ನದ ಹುಡುಗನ ಪರಿಶ್ರಮದ ಹಿಂದೆ ರಾಜ್ಯದ ಗುರುವಿನ ಪಾತ್ರಕ್ಕೆ ಮೆಚ್ಚಿ ರಾಜ್ಯ ಸರ್ಕಾರ ಕೂಡ ಕೋಚ್​ ಕಾಶಿನಾಥ್​ಗೆ 10 ಲಕ್ಷ ಬಹುಮಾನ ಪ್ರಶಸ್ತಿ ಘೋಷಿಸಿತ್ತು.

ಕಾಶೀನಾಥ್ ನಾಯ್ಕ್ ಕೂಡ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭಾನ್ವಿತ ಜಾವೆಲಿನ್ ಥ್ರೋವರ್ ನವದೆಹಲಿಯಲ್ಲಿ 2010ರಂದು ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ ವೇಳೆ ಕಾಶೀನಾಥ್ ಜಾವೆಲಿನ್ ಥ್ರೋನಲ್ಲಿ ಕಂಚಿನ ಪದಕ ಜಯಿಸಿದ್ದರು. ಅದಾಗಿ ಒಂದು ವರ್ಷದ ಬಳಿಕ 14 ವರ್ಷ ಪ್ರಾಯದವರಾಗಿದ್ದ ನೀರಜ್ ಚೋಪ್ರಾ ಜೈವೀರ್ ಚೌಧರಿ ಜೊತೆಗೆ ಜಾವೆಲಿನ್ ಎಸೆತದ ಅಭ್ಯಾಸ ಆರಂಭಿಸಿದ್ದರು. ಅಂದ್ಹಾಗೆ ಆವತ್ತು ಕಾಶಿನಾಥ್‌ಗೆ ಸಿಕ್ಕ ಕಂಚಿನ ಪದಕ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಜಾವೆಲಿನ್‌ ಎಸೆತದಲ್ಲಿ ಸಿಕ್ಕ ಮೊದಲ ಪದಕ. ಅಲ್ಲದೆ, 1982ರ ಏಷ್ಯನ್ ಗೇಮ್ಸ್‌ ಪದಕದ ಬಳಿಕ ಭಾರತಕ್ಕೆ ಸಿಕ್ಕ ಚೊಚ್ಚಲ ಪದಕ. ಅಥ್ಲೀಟ್‌ ಆಗಿ ವೃತ್ತಿ ಬದುಕು ಮುಗಿಸಿದ ಬಳಿಕ ಕಾಶಿನಾಥ್ ಕೋಚಿಂಗ್‌ ವೃತ್ತಿಗೆ ಬಂದಿದ್ದರು. 2016ಲ್ಲಿ ಪೋಲ್ಯಾಂಡ್‌ನಲ್ಲಿ ನಡೆದಿದ್ದ ಅಂಡರ್-20 ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಬಂಗಾರದ ಪದಕ ಗೆದ್ದಾಗ ಗ್ಯಾರಿ ಕ್ಯಾಲ್ವರ್ಟ್ ಜೊತೆಗೆ ಸಹ ಕೋಚ್ ಆಗಿ ಕಾಶಿನಾಥ್ ಅವರೂ ನೀರಜ್‌ಗೆ ಕೋಚಿಂಗ್ ನೀಡುತ್ತಿದ್ದರು. ಈಗ ಕಾಶಿನಾಥ್ ಅವರು ಮಹಾರಾಷ್ಟ್ರ ಪುಣೆಯಲ್ಲಿ ಇಂಡಿಯನ್ ಆರ್ಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು