4:04 PM Saturday20 - April 2024
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಕರ್ಕಶ ಹಾರ್ನ್ ಗಳ ಕಿರಿಕಿರಿ ತಪ್ಪಿಸಲು ಪೊಲೀಸ್ ಕಾರ್ಯಾಚರಣೆ: ಹಾರ್ನ್ ಕಿತ್ತೆಸೆದು… ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ…

ಇತ್ತೀಚಿನ ಸುದ್ದಿ

ಹೊಸ್ಮಾರುವಿನಲ್ಲಿ ಕಾಂಪ್ಲೆಕ್ಸ್‌ಗೆ ಪ್ರಥಮ ಬಾರಿ ತುಲುಲಿಪಿ ನಾಮಫಲಕ

22/08/2021, 18:08

ಹೊಸ್ಮಾರು(reporterkarnataka.com); ರವೀಂದ್ರ ಪೂಜಾರಿ ಮಾಲಿಕತ್ವದ ಹೊಸ್ಮಾರು ಈದು ಕ್ರಾಸ್ ಬಳಿಯಿರುವ ಮನ್ವಿತ್ ಕಾಂಪ್ಲೆಕ್ಸ್‌ಗೆ ಜೈ ತುಲುನಾಡ್ ರಿ. ಸಂಘಟನೆ ಕಾರ್ಲ ಘಟಕದ ಸಹಕಾರದೊಂದಿಗೆ ತುಲು ಲಿಪಿಯಲ್ಲಿ ನಾಮಫಲಕ ಅಳವಡಿಸಲಾಯಿತು.


ಈದು ಗ್ರಾಮದಲ್ಲಿ ಪ್ರಥಮ ಬಾರಿ ಕಾಂಪ್ಲೆಕ್ಸ್‌ಗೆ ತುಲುಲಿಪಿ ಅಳವಡಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು. ರವೀಂದ್ರ ಪೂಜಾರಿಯವರು ತುಲುಲಿಪಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು ತಾನು ಹೊರ ದೇಶದಲ್ಲಿದ್ದರೂ ಕೂಡ ತುಲು ಲಿಪಿಯನ್ನು ಕಲಿಯುತ್ತಿದ್ದಾರೆ ಮತ್ತು ಅವರ ಪತ್ನಿ ಮಕ್ಕಳು ತುಲುಲಿಪಿಯನ್ನು ಕಲಿಯುತ್ತಿದ್ದಾರೆ.

ನಾಮ ಫಲಕದ ಉದ್ಘಾಟನೆಯನ್ನು ಪೂರ್ಣಿಮಾ ರವೀಂದ್ರ ಪೂಜಾರಿ ನೆರೆವೇರಿಸಿದರು. ಈ ಸಂದರ್ಭದಲ್ಲಿ ಜೈ ತುಲುನಾಡ್ ರಿ. ಕೇಂದ್ರ ಸಂಘಟನಾ ಕಾರ್ಯದರ್ಶಿ ಆರ್‌.ಸಿ   ದುರ್ಗಾನಗರ, ಕಾರ್ಲ ಯುನಿಟ್‌ನ ಸಂಚಾಲಕರಾದ ವಿಶು ಶ್ರೀಕೇರ, ಶೇಖರ್ ಶ್ರೀಗಂಗೆ, ನಾರಾವಿ  ಸಂತ ಅಂತೋನಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರದೀಪ್ ಬಿ.

ಹಾಗೂ ಸದಸ್ಯರಾದ ಪ್ರಶಾಂತ್ ಶ್ರೀನಿಧಿ, ಪ್ರೀತಂ ಕೋಟ್ಯಾನ್ ಬಜಗೋಳಿ, ದಿವಾಕರ್ ಈದು, ಗಣೇಶ್ ಈದು, ಲಕ್ಮೀ , ಹೋಟೆಲ್ ನ್ಯೂ ಸುರಕ್ಷಾ ಮಾಲಕರಾದ ಗುಲಾಬಿ ಗೋಪಾಲ್, ಶೃಂಗಾರ ಪ್ಯಾನ್ಸಿ& ಪಾರ್ಲರ್ ಮಾಲಕರಾದ ವೀಣಾ ಸತೀಶ್ ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು