3:42 PM Friday19 - April 2024
ಬ್ರೇಕಿಂಗ್ ನ್ಯೂಸ್
ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ…

ಇತ್ತೀಚಿನ ಸುದ್ದಿ

Traveling Story | ಗೇರ್‌ಲೆಸ್(ಸಾದಾ) ಸೈಕಲ್‌ನಲ್ಲಿ ಕೇರಳದಿಂದ ಕಾಶ್ಮೀರಕ್ಕೆ ಸೋಲೊ ಟ್ರಿಪ್ ಹೊರಟ 21ರ ಯುವಕ

09/08/2021, 15:52

ಅನುಷ್ ಪಂಡಿತ್, ಮಂಗಳೂರು
ಗಣೇಶ್ ಅದ್ಯಪಾಡಿ, ಮಂಗಳೂರು
info.reporterkarnata@gmail.com

ಟ್ರಾವೆಲಿಂಗ್ ಎನ್ನುವಂತಹದು ಹಲವರಿಗೆ ಕೆಲವರಿಗೆ ಕೆಲಸದ ಅನಿವಾರ್ಯವಾದರೆ ಇನ್ನೂ ಕೆಲವರಿಗೆ ಹುಚ್ಚು. ಅದರಲ್ಲೂ ಪ್ರವಾಸವನ್ನು ರೋಮಾಂಚನವಾಗಿಸಿಕೊಳ್ಳುವ ಮನಸ್ಸು ಹಲವರಿಗೆ. ಹೀಗೆ ರೋಮಾಂಚಕ ಪ್ರವಾಸದ ಅನುಭವವನ್ನು ಪಡೆದುಕೊಳ್ಳಬೇಕು ಎನ್ನುವ ಹಂಬಲದೊಂದಿಗೆ ಕೇರಳ ಮಣ ಪುರಂ‌ನ ಯುವಕ ಕಾಶ್ಮೀರಕ್ಕೆ ಹೊರಟಿದ್ದಾರೆ.

ಕೇರಳದಿಂದ ಕಾಶ್ಮೀರಕ್ಕೆ ಪ್ರವಾಸ ಹೊಸತೇನಲ್ಲ ಆದರೆ ಈ ತರುಣನ ಪ್ರವಾಸದ ವಿಧಾನವೇ ರೋಚಕವಾಗಿದೆ. ಸಾಮಾನ್ಯವಾಗಿ ಹೈ ಎಂಡ್ ಗೇರ್ ಸೈಕಲ್‌ಗಳಲ್ಲಿ ದೂರದೂರುಗಳಿಗೆ ಪ್ರವಾಸಕ್ಕೆ ಹೋಗುವುದು ಸಾಮಾನ್ಯ ಆದರೆ ಕೇರಳದ ಸಫಾನ್ ಎನ್ನುವ ಈ ಕ್ರೇಝಿಯೆಸ್ಟ್ ಯುವಕ ಹೊರಟ್ಟಿದ್ದು ಸಾಮಾನ್ಯ ಹೀರೊ ಸೈಕಲ್‌ನಲ್ಲಿ.

ಪ್ರವಾಸ ಎನ್ನುವುದು ಇವರಿಗೆ ಅತ್ಯಂತ ಪ್ರಿಯವಾದ ವಿಷಯ, ಇಲ್ಲಿಯವರೆಗೆ ಹಿಮಾಚಲ ಪ್ರದೇಶದ ಮನಾಲಿ ಸೇರಿದಂತೆ ಅನೇಕ ಕಡೆಗಳಿಗೆ ಭೇಟಿ ನೀಡಿದ್ದು, ಇದೇ ಮೊದಲ ಬಾರಿ ಸೈಕಲ್‌ನಲ್ಲಿ ಪ್ರವಾಸ ಹೊರಟಿದ್ದಾರೆ.

ಕೇರಳದಿಂದ ಏಳು ದಿನಗಳ ಹಿಂದೆ ಪ್ರಯಾಣ ಆರಂಭಿಸಿದ ಸಫಾನ್ ಇಂದು(ಆ.9) ಮಂಗಳೂರು ತಲುಪಿದ್ದಾರೆ. ಇವತ್ತು ಗೆಳೆಯನ ಮನೆಯಲ್ಲಿ ರೆಸ್ಟ್ ಮಾಡಿ ಮತ್ತೆ ಪಯಣ ಮುಂದುವರಿಸಲಿದ್ದಾರೆ. ಸುಮಾರು ಎರಡು ತಿಂಗಳ ಪ್ರವಾಸದ ಲೆಕ್ಕಾಚಾರ ಮಾಡಿಕೊಂಡಿರುವ ಇವರ ಸೈಕಲಿನಲ್ಲಿ ಮಲಗಲು ಚಾಪೆ, ಬ್ಯಾಗ್ ದಿನಬಳಕೆಗೆ ಬೇಕಾಗುವ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ.


ಕಾಲಲ್ಲಿ ಶೂ ಅಥವಾ ಬೇರೆ ಯಾವುದೇ ಅನಕೂಲಕರ ಚಪ್ಪಲಿ ಇರದೆ ಸಾಮಾನ್ಯ ಚಪ್ಪಲಿ ಧರಿಸಿಕೊಂಡು, ಮಳೆ ಹಾಗೂ ಬಿಸಿಲಿನ ಕಣ್ಕಟ್ಟಿನ ಜೊತೆಗೆ ತಿರುವು-ಮುರುವು ಹಾಗೂ ಏರಿಳಿತಗಳ ದಾರಿಯಲ್ಲಿ ಧರೆಯ ಸ್ವರ್ಗಕ್ಕೆ ದೇವರನಾಡಿನಿಂದ ಹೊರಟ ಯುವಕನ ಈ ಧೈರ್ಯವನ್ನು ಮೆಚ್ಚಲೆಬೇಕು.

 

ಡಿಪ್ಲೊಮಾ ಕಲಿಯುತ್ತಿರುವ ಸಫಾನ್‌ ಈಗಿನ ಖಾಲಿ ಸಮಯದಲ್ಲಿ ಟ್ರಾವೆಲಿಂಗ್ ಹೊರಟಿದ್ದಾರೆ. ಸೈಕಲ್‌ನಲ್ಲಿ ಕೇರಳ ಟು ಕಾಶ್ಮೀರ್ ಎಂದು ಸ್ಟಿಕರ್ ಅಂಟಿಸಿಕೊಂಡಿದ್ದು Al_Azhar ಎನ್ನುವ ತಮ್ಮ ಇನ್ಸ್ಟಾ ಐಡಿಯನ್ನು ಮೆನ್ಶನ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು