11:55 PM Wednesday24 - April 2024
ಬ್ರೇಕಿಂಗ್ ನ್ಯೂಸ್
ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ…

ಇತ್ತೀಚಿನ ಸುದ್ದಿ

ತುಂಬಾ ಸೆಂಟಿಮೆಂಟಲ್ ಕಣ್ರೀ ನಮ್ಮ ಸಿಎಂ: ಮುದ್ದಿನ ನಾಯಿ ಸತ್ತಾಗ ಕಣ್ಣೀರಿಟ್ಟ ಬೊಮ್ಮಾಯಿ !

28/07/2021, 21:07

ಬೆಂಗಳೂರು(reporterkarnataka news): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಕಣ್ಣೀರಿಟ್ಟ ಘಟನೆ ನಡೆದಿತ್ತು. ಸಿಎಂ ಆಗುವ ಕೇವಲ ಒಂದು ವಾರದ ಮುನ್ನ ಬೊಮ್ಮಾಯಿ ಅವರು ದುಃಖ ತಾಳಲಾಗದೆ ಕರ್ಚೀಫನ್ನು ಕಣ್ಣಿಗೆ ಒತ್ತಿಕೊಂಡಿದ್ದರು. ತನ್ನ ಕುಟುಂಬದ ಸದಸ್ಯರ ಎದುರೇ ಬೊಮ್ಮಾಯಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು.


ಬೊಮ್ಮಾಯಿ ಅವರ ಬೆಂಗಳೂರಿನ ನಿವಾಸದಲ್ಲೇ ಈ ಘಟನೆ ನಡೆದಿತ್ತು. ಇವೆಲ್ಲ ನಡೆದಾಗ ಅವರು ಗೃಹ ಸಚಿವರಾಗಿದ್ದರು. ಅವರು ಸಾಕಿ ಸಲಹಿದ ಮುದ್ದಿನ ನಾಯಿ ಮೃತಪಟ್ಟಾಗ ಅವರು ದುಃಖ ತಾಳಲಾಗದೆ ಕಣ್ಣೀರು ಹಾಕಿದ್ದರು. ಈ ಕುರಿತು ವೀಡಿಯೊವೊಂದು ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ವೈರಲ್ ಆಗಿದೆ. ಮುದ್ದಿನ ನಾಯಿಗೆ ಅಂತಿಮ ವಿದಾಯ ಹೇಳುವಾಗ ಬೊಮ್ಮಾಯಿ ಜತೆ ಕುಟುಂಬಸ್ಥರು ಉಪಸ್ಥಿತರಿದ್ದರು. ಶ್ವಾನದ ಮೃತದೇಹದ ಮೇಲೆ ಹೂವಿನ ಹಾರ ಹಾಕಲಾಗಿತ್ತು.

ಬೊಮ್ಮಾಯಿ ಅವರು ನೆಲದಲ್ಲಿ ಮಂಡಿಯೂರಿ ಬಾಗಿ ಶ್ವಾನಕ್ಕೆ ಅಂತಿಮ ಮುತ್ತು ನೀಡಿದ್ದರು. ನಂತರ ದುಃಖ ತಾಳಲಾಗದೆ ಕಂಗಳನ್ನು ಕರ್ಚೀಫ್ ನಲ್ಲಿ ಒರಸಿಕೊಂಡರು. ಮುಖ್ಯಮಂತ್ರಿಯವರ ಪ್ರಾಣಿ ಪ್ರೇಮಕ್ಕೆ ಹಾಟ್ಸಾಪ್. 

ಇತ್ತೀಚಿನ ಸುದ್ದಿ

ಜಾಹೀರಾತು