9:14 PM Friday19 - April 2024
ಬ್ರೇಕಿಂಗ್ ನ್ಯೂಸ್
ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ…

ಇತ್ತೀಚಿನ ಸುದ್ದಿ

ಮಳೆ ಹನಿಯಲ್ಲೂ ಹಣದ ಹೊಳೆ?: ಸ್ಪೆಷಲ್ ಗ್ಯಾಂಗ್ ಹೆಸರಿನಲ್ಲಿ ಭ್ರಷ್ಟಾಚಾರ?; ಪಾಲಿಕೆ ಕಮಿಷನರೇ..ಮಿನಿ ಲಾರಿ, 480 ಕೆಲಸಗಾರರ ಪೆರೇಡ್ ನಡೆಸಿ !! 

16/07/2021, 07:34

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು ಮಹಾನಗರಪಾಲಿಕೆಯು ಪ್ರತಿ ವರ್ಷದಂತೆ ಈ ಬಾರಿಯೂ ವಾರ್ಡ್ ಗೊಂದು ಸ್ಪೆಷಲ್ ಗ್ಯಾಂಗ್ ಗಳನ್ನು ರಚಿಸಿದ್ದು, ಇದರಲ್ಲಿ ಭ್ರಷ್ಟಾಚಾರದ ವಾಸನೆ ಮಂಗಳೂರು ಜನತೆಯ ಮೂಗಿಗೆ ಬಡಿಯಲಾರಂಭಿಸಿದೆ. ಪ್ರತಿ ವಾರ್ಡ್ ಗೆ 3.26 ಲಕ್ಷ ರೂ.ಗಳ ಕಾಮಗಾರಿ ನಡೆಸಲು ಅವಕಾಶ ನೀಡಲಾಗಿದ್ದು, 60 ವಾರ್ಡ್ ಗಳಿಗೆ 2 ಕೋಟಿಗೂ ಹೆಚ್ಚು ತೆರಿಗೆದಾರರ ಹಣ ಪೋಲು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಪಾಲಿಕೆ ರಚಿಸುವ ಪ್ರತಿ ಸ್ಪೆಷಲ್ ಗ್ಯಾಂಗ್ ನಲ್ಲಿ ತಲಾ 8 ಮಂದಿ ಕೆಲಸಗಾರರು ಇರುತ್ತಾರೆ ಎಂದು ಲೆಕ್ಕ ತೋರಿಸಲಾಗುತ್ತದೆ. 8 ಮಂದಿಯಂತೆ 60 ವಾರ್ಡ್ ಗಳಿಗೆ ಒಟ್ಟು 480 ಕೆಲಸಗಾರರಿರುತ್ತಾರೆ. ಪ್ರತಿ ಗ್ಯಾಂಗ್ ಗೆ ಒಂದು ಮಿನಿ ಲಾರಿ, ಮರ ಕಡಿಯುವ ಕಟ್ಟರ್, ಹಗ್ಗ, ಟಾರ್ಚ್ ಇನ್ನಿತರ ಪರಿಕರ ನೀಡಲಾಗುತ್ತದೆ. ಮಳೆಗಾಲದ 3 ತಿಂಗಳು ಇವರಿಗೆ ಡ್ಯೂಟಿ ಇರುತ್ತದೆ. ಪ್ರತಿ ವಾರ್ಡ್ ನ ಚರಂಡಿ ಸ್ವಚ್ಛ ಮಾಡುವುದು, ಹೂಳು ತೆಗೆಯುವುದು, ಕೃತಕ ನೆರೆ ಬಂದರೆ ಕಾರ್ಯಪ್ರವೃತ್ತರಾಗುವುದು,

ಗಾಳಿ ಮಳೆಗೆ ಮರ ಬಿದ್ದರೆ ಅದನ್ನು ತೆರವುಗೊಳಿಸುವುದು ಇವರ ಕೆಲಸ. ಆದರೆ ಪಾಲಿಕೆ ಆಡಳಿತ ಹೇಳಿದಂತೆ ಈ ಯಾವುದೇ ಕೆಲಸ ಹೆಚ್ಚಿನ ವಾರ್ಡ್ ಗಳಲ್ಲಿ ಆಗಿರುವುದಿಲ್ಲ. ಚರಂಡಿ ಕ್ಲೀನ್ ನಡೆದೇ ಇಲ್ಲ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ.

ಇದೆಲ್ಲದರ ನಡುವೆ ಮಂಗಳೂರಿನ ಪ್ರಜ್ಞಾವಂತ ನಾಗರಿಕರಲ್ಲಿ
ಉಂಟಾಗಿರುವ ಸಂದೇಹ ಏನೆಂದರೆ, ಎಲ್ಲ 60 ವಾರ್ಡ್ ಗಳಲ್ಲಿ ಒಮ್ಮೆಲೇ ಮರ ಬೀಳುತ್ತಾ? ಮತ್ತು ಎಲ್ಲ ವಾರ್ಡ್ ಗಳಲ್ಲಿ ಏಕಕಾಲದಲ್ಲಿ ಚರಂಡಿ ಹೂಳೆತ್ತುವ ಕೆಲಸ ನಡೆಯುತ್ತಾ ?ಎನ್ನುವುದು. ಹಾಗಾದರೆ ಇವರಿಗೆ ವಾರ್ಡ್ ಗೆ ಒಂದು ಮಿನಿ ಲಾರಿ ಹಾಗೂ ಪ್ರತಿ ವಾರ್ಡ್ ಗೆ 8 ಮಂದಿಯಂತೆ 480 ಮಂದಿ ಕೆಲಸಗಾರರ ಅಗತ್ಯವಿದೆಯೇ ಎಂದು ತೆರಿಗೆದಾರರು ಸಹಜವಾಗಿಯೇ ಪ್ರಶ್ನಿಸುತ್ತಾರೆ. ಇಲ್ಲಿಂದಲೇ ಮಳೆಗಾಲದ ಕೆಸರಿನ ನಡುವೆ ಪಾಲಿಕೆಯ ಕೊಳಕು ಭ್ರಷ್ಟಾಚಾರ ಮೂಗಿಗೆ ಬಡಿಯಲಾರಂಭಿಸುತ್ತದೆ. ಒಂದು ಮಾಹಿತಿಯ ಪ್ರಕಾರ ಪಾಲಿಕೆ ಅಧಿಕಾರಸ್ಥರು ಜನರನ್ನು ಫೂಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. 480 ಕೆಲಸಗಾರರು ಮತ್ತು 60 ಮಿನಿ ಲಾರಿ ಎಲ್ಲವೂ ಬೋಗಸ್. ಇದು ಅಕ್ಷಾಂಶ, ರೇಖಾಂಶದ ಹಾಗೆ ಕಾಲ್ಪನಿಕ ಸಂಖ್ಯೆಯಾಗಿದೆ. 8-10 ಲಾರಿ ಮತ್ತು 10-20 ಕೆಲಸಗಾರಿಂದ ಇಡೀ 60 ವಾರ್ಡ್ ಗಳಲ್ಲಿ ಕಾಮಗಾರಿ ನಡೆಸಿದ ಶಾಸ್ತ್ರವನ್ನು ಮಾಡಿ ಮುಗಿಸಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಈ ಆಪಾದನೆ ನಿಜವಾಗಿಯೂ ಸತ್ಯಕ್ಕೆ ದೂರವಾಗಿದ್ದರೆ ಪಾಲಿಕೆ ಆಡಳಿತ 60 ಮಿನಿ ಲಾರಿ ಹಾಗೂ 480 ಮಂದಿ ಕೆಲಸಗಾರರನ್ನು ಜನರ ಮುಂದೆ ಪೆರೇಡ್ ನಡೆಸುವ ಅಗತ್ಯ ಎದುರಾಗುತ್ತದೆ. ಮಳೆಗಾಲದ ಹೆಸರಿನಲ್ಲಿ ಕಾರ್ಪೊರೇಟರ್ ಗಳು, ಗುತ್ತಿಗೆದಾರರು, ಪಾಲಿಕೆಯ ಎಂಜಿನಿಯರ್ ಗಳು ಹಣ ಹಂಚಿಕೊಳ್ಳುವುದು ಇನ್ನಾದರೂ ನಿಲ್ಲಬೇಕೆನ್ನುವುದು ಜನಸಾಮಾನ್ಯರ ಹಕ್ಕೊತ್ತಾಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು