5:38 PM Saturday20 - April 2024
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಕರ್ಕಶ ಹಾರ್ನ್ ಗಳ ಕಿರಿಕಿರಿ ತಪ್ಪಿಸಲು ಪೊಲೀಸ್ ಕಾರ್ಯಾಚರಣೆ: ಹಾರ್ನ್ ಕಿತ್ತೆಸೆದು… ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ…

ಇತ್ತೀಚಿನ ಸುದ್ದಿ

ಜನರ ರಕ್ಷಣೆ, ಸಮಾಜದಲ್ಲಿನ ಬೇಕು ಬೇಡಗಳಿಗೆ ಪೋಲೀಸ್ ಇಲಾಖೆ ದಕ್ಷತೆಯಿಂದ ಶ್ರಮಿಸುತ್ತಿದೆ: ಎಸಿಪಿ ನಟರಾಜ್

04/07/2021, 21:36

ಸುರತ್ಕಲ್(reporterkarnataka news): ಸರಕಾರಿ ಇಲಾಖೆಯಲ್ಲಿ ಅತಿ ಪಾರದರ್ಶಕತೆ ಹಾಗೂ ನೇಮಕಾತಿಯಲ್ಲಿ ಪೋಲೀಸ್ ಇಲಾಖೆಯು ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯ ಇಲಾಖೆಯಾಗಿದೆ. ಜನರ ರಕ್ಷಣೆ ಮಾತ್ರವಲ್ಲದೇ ಸಮಾಜದಲ್ಲಿನ ಬೇಕುಬೇಡಗಳನ್ನು ಕೂಡಾ ಸರಿದೂಗಿಸುವಲ್ಲಿ ಪೋಲೀಸ್ ಇಲಾಖೆಯು ಅತ್ಯಂತ ದಕ್ಷವಾಗಿ ಶ್ರಮವಹಿಸುತ್ತಿವೆ ಎಂದು ಮಂಗಳೂರು ನಗರ ಸಂಚಾರಿ ವಿಭಾಗದ ಸಹಾಯಕ ಆಯುಕ್ತ ಎಮ್.ಎ ನಟರಾಜ್  ಹೇಳಿದರು. 

ಅವರು ಕಾಟಿಪಳ್ಳ ಅಭ್ಯುದಯ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಮಂಗಳಪೇಟೆ ಶ್ರೀಶಾರದಾ ಭಜನಾ ಮಂದಿರದಲ್ಲಿ ಆದಿತ್ಯವಾರದಂದು ಜರುಗಿದ ೧೯ ವರ್ಷದಿಂದ ೨೭ ವರ್ಷದ ಒಳಗಿನ ಯುವಕ- ಯುವತಿಯರಿಗೆ ನಾಗರಿಕ ಪೋಲೀಸ್ ಕಾನ್ಸ್ ಸ್ಟೇಬಲ್ ನೇಮಕಾತಿ ಉದ್ಯೋಗದ ಮಾಹಿತಿ ಶಿಬಿರವನ್ನು 

ಉದ್ಘಾಟಿಸಿ ಪೋಲೀಸ್ ಅಕಾಂಕ್ಷಿ ಅಭ್ಯರ್ಥಿಗಳಿಗೆ ಮಾಹಿತಿ ನೀಡುತ್ತಾ, ಪೋಲೀಸ್ ಇಲಾಖೆಯ ಎಸ್ ಐ, ಪಿಸಿ ಹುದ್ದೆಗಳಿಗೆ ಸೇರಲು ಈಗಾಗಲೇ  ರಾಜದಾದ್ಯಂತ ನೇಮಕಾತಿಗಳು ನಡೆಯುತ್ತಿದ್ದು ಯುವಜನಾಂಗಕ್ಕೆ ಇದು ಪೂರಕವಾಗಿದ್ದು ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜದಲ್ಲಿ ಅತ್ಯುನ್ನತ ಹುದ್ದೆಯನ್ನು ಪಡೆಯಲು ಸಾಧ್ಯವಾಗುವುದು ಪೋಲೀಸ್ ಇಲಾಖೆಯಲ್ಲಿ ಮಾತ್ರ ಎಂದು ಪೋಲೀಸ್ ಅಕಾಂಕ್ಷಿ ಯುವಸಮೂಹಕ್ಕೆ ನೇಮಕಾತಿಯ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ವಾದಿರಾಜ್, ಗಣೇಶಪುರ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಸುರತ್ಕಲ್ ಪೊಲೀಸ್ ಠಾಣಾ ಎಸ್ ಐ ಚಂದ್ರಶೇಖರ್ ಉಪಸ್ಥಿತರಿದ್ದರು.

ಪೋಲೀಸ್ ನಾಗರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೇಮಕಗೊಂಡ ಸಿಬ್ಬಂದಿಗಳಾದ ಸುನೀಲ್, ವೆಂಕಟೇಶ್‌ ಮಾಹಿತಿ ಶಿಬಿರದಲ್ಲಿ ನೇಮಕಾತಿಯ ಕುರಿತು ಮಾಹಿತಿ ನೀಡಿದರು. ದೀಕ್ಷಿತ್‌ ಕುಲಾಲ್ ಸ್ವಾಗತಿಸಿದರು. ವಿಕಾಸ್ ಶೆಟ್ಟಿ ವಂದಿಸಿದರು.
ಭರತ್ ರಾಜ್ ಕುತ್ತೆತ್ತೂರು‌ ಕಾರ್ಯಕ್ರಮ ನಿರೂಪಿಸಿದರು

ಇತ್ತೀಚಿನ ಸುದ್ದಿ

ಜಾಹೀರಾತು