ಇತ್ತೀಚಿನ ಸುದ್ದಿ
ಲಿಂಗಸುಗೂರು: ಕಂದಾಯ ದಿನಾಚರಣೆಯಲ್ಲಿ ಹಸಿರೋತ್ಸವ ಸಂಭ್ರಮ
02/07/2021, 17:44
ಅಮರೇಶ್ ಲಿಂಗಸುಗೂರು
info.reporterkarnataka@gmail.com
ಲಿಂಗಸೂಗುರು ಮಿನಿ ವಿಧಾನಸೌಧದಲ್ಲಿ ತಾಲೂಕು ಕಂದಾಯ ಇಲಾಖೆ ವತಿಯಿಂದ ಕಂದಾಯ ದಿನಾಚರಣೆ 2021ನ್ನು ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದಿಂದ ಈ ಬಾರಿ ವಿಶೇಷವಾಗಿ ‘ಹಸಿರೋತ್ಸವ’ ಎಂಬ ಧ್ಯೇಯ ವಾಕ್ಯದ ಸಂಕಲ್ಪದೊಂದಿಗೆ ಸಸಿ ನೆಟ್ಟು ನೀರು ಹಾಕುವ ಮೂಲಕ ಅರ್ಥ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಮಾತನಾಡಿ,ಕಂದಾಯ ಇಲಾಖೆ ಅಂತ ಹೆಸರು ಬರೊದಕ್ಕೆ ಮೂಲ ಕಾರಣ ಇಲಾಖೆಯಿಂದ ಆದಾಯ ಬರುತ್ತಿತ್ತು. ಹಾಗಾಗಿ ಕಂದಾಯ ಇಲಾಖೆ ಅಂತ ಕರೆದರು. ಆದರೆ ಅದು ಇಂದು ಮಹತ್ವವನ್ನು ಕಳೆದುಕೊಂಡಿದೆ ಎಂದು ಹೇಳಿದರು. ಕಾರ್ಯಕ್ರಮದ ಕುರಿತು ತಹಶೀಲ್ದಾರ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಲಿಂಗಸೂಗೂರು ಉಪವಿಭಾಗದ ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಹಶೀಲ್ದಾರ್ ಚಾಮರಾಜ ಪಾಟೀಲ್, ಗ್ರೆಡ್ 2 ತಹಶೀಲ್ದಾರ್ ಬಿ.ಜಿ.ಜಳಕಿಮಠ, ಗುರುಗುಂಟಾ ಉಪ ತಹಶೀಲ್ದಾರ್ ರಂಗಪ್ಪ ನಾಯಕ ,ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣ, ಕಂದಾಯ ನಿರೀಕ್ಷಕರಾದ ರಾಘವೇಂದ್ರ ಗ್ರಾಮ ಲೆಕ್ಕಾಧಿಕಾರಿ ಗಳ ಸಂಘದ ತಾಲ್ಲೂಕು ಅಧ್ಯಕ್ಷ ಅಮರೇಶ ರಾಠೋಡ್ ಸೇರಿದಂತೆ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ಇನ್ನಿತರರು ಹಾಜರಿದ್ದರು.