11:28 PM Wednesday24 - April 2024
ಬ್ರೇಕಿಂಗ್ ನ್ಯೂಸ್
ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ…

ಇತ್ತೀಚಿನ ಸುದ್ದಿ

ಪ್ರಯಾಣಿಕರಿಂದ ತುಂಬಿರುವ ಸರಕಾರಿ ಸಿಟಿ ಬಸ್: ಇದು ಕೊರೊನಾ 3ನೇ ಅಲೆಗೆ ಸಿದ್ಧತೆಯೇ?: ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳಲಿ

25/06/2021, 17:03

ಮಂಗಳೂರು(reporterkarnataka news); ಸ್ಟೇಟ್ ಬ್ಯಾಂಕ್ – ತಲಪಾಡಿ ಸರಕಾರಿ ಬಸ್ ಸೇರಿದಂತೆ ಹಲವು ಕಡೆ ಸಂಚರಿಸುವ ನರ್ಮ್ ಬಸ್ ಗಳು ಬೆಳಗ್ಗೆ ಹಾಗೂ ಸಂಜೆ ವೇಳೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಕೊರೊನಾ 3ನೇ ಅಲೆಗೆ ಇಲ್ಲಿಂದಲೇ ಸಿದ್ಧತೆ ನಡೆಸಿದಾಗೆ ಇದೆ ಎಂದು ಸಾರ್ವಜನಿಕ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಜುಲೈ 1ರ ವರೆಗೆ ಖಾಸಗಿ ಸಿಟಿ ಬಸ್ ಗಳ ಓಡಾಟವಿಲ್ಲದ ಕಾರಣ
ಪ್ರಯಾಣಿಕರು ಸರಕಾರದ ನರ್ಮ್ ಬಸ್ ಗಳನ್ನೇ ಆಶ್ರಯಿಸಬೇಕಾಗಿದೆ. ಇದು ಪ್ರಯಾಣಿಕರ ತಪ್ಪಲ್ಲ, ಸ್ವಂತ ವಾಹನ ಇಲ್ಲದವರು ಯಾವುದೇ ರಿಸ್ಕ್ ತೆಗೆದುಕೊಂಡಾದರೂ ಗಮ್ಯ ಸ್ಥಾನ ಸೇರಲೇ ಬೇಕು. ಜಿಲ್ಲಾಡಳಿತ ಇದಕ್ಕೆ ತಕ್ಕ ವ್ಯವಸ್ಥೆ ಮಾಡಲು ವಿಫಲವಾಗಿರುವುದರಿಂದ ಕೊರೊನಾ ಗೈಡ್ ಲೈನ್ಸ್ ಉಲ್ಲಂಘಿಸಿ ನಾಗರಿಕರು ಪ್ರಯಾಣ ಮಾಡುವ ಪ್ರಮೇಯ ಒದಗಿ ಬಂದಿದೆ.

ತೊಕ್ಕೊಟ್ಟು, ತಲಪಾಡಿ, ಸುರತ್ಕಲ್, ಬೊಂದೇಲ್, ಕಾವೂರು ಮುಂತಾದ ಕಡೆ ಮಾಮೂಲಿಯಾಗಿ ಪ್ರಯಾಣಿಕರ ಸಂಖ್ಯೆಯೂ ಜಾಸ್ತಿ ಇರುತ್ತದೆ. ಹಾಗಾಗಿ ಪ್ರಯಾಣಿಕರ ಸಾಂದ್ರತೆ ಜಾಸ್ತಿ ಇರುವ ರೂಟ್ ಗಳಿಗೆ ನಾಲ್ಕು ಬಸ್ ಜಾಸ್ತಿ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರಿಕರ ಅಭಿಪ್ರಾಯ. ಇಲ್ಲದಿದ್ದರೆ ಕೊರೊನಾ 3ನೇ ಅಲೆಗೆ ನಾವೇ ಸಿದ್ಧತೆ ಮಾಡಿದಾಗೆ ಆಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು