ಇತ್ತೀಚಿನ ಸುದ್ದಿ
ಹಸಿರಿಗೆ ಉಸಿರಾದ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜು: ಸಸಿ ನೆಟ್ಟ ನೂತನ ಶಾಸಕ ತುರುವಿಹಾಳ
23/06/2021, 21:19
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
Info.reporterkarnataka@gmail.com
ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಅಶ್ರಯದಲ್ಲಿ ದೇವನಾಂಪ್ರಿಯ ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ನೂತನ ಶಾಸಕ ಬಸವನಗೌಡ ತುರುವಿಹಾಳ ಅವರು ಸಸಿ ನೆಟ್ಟರು. ಕಾಲೇಜು ಪ್ರಾಂಶುಪಾಲ ಪಂಪನಗೌಡ ಜಿ. ಪಾಟೀಲ್, ಪ್ರಾಧ್ಯಾಪಕರಾದ ಶಿವಗ್ಯಾನಪ್ಪ ಲಕ್ಕುಂಡಿ, ವೀರೇಶ್ ಜಂಗಮರಹಳ್ಳಿ,, ಶ್ರೀನಿವಾಸ ಯಾಳಿಗಿ, ಸಂಸ್ಥೆಯ ಕಾರ್ಯದರ್ಶಿ ಹಾಗೂ ಉಪನ್ಯಾಸಕ ರಾಮಣ್ಣ ಹಂಪರಗುಂದಿ ಹಾಗೂ ಕಾಲೇಜು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.