ಇತ್ತೀಚಿನ ಸುದ್ದಿ
ದೇವಾಲಯಗಳ ನಿರ್ಮಾಣದಿಂದ ಮಾನಸಿಕ ಶಾಂತಿ, ನೆಮ್ಮದಿ ಸಾಧ್ಯ: ಶಾಸಕ ಸುರೇಶ ಗೌಡ
23/06/2021, 18:38
ದೇವಲಾಪುರ ಜಗದೀಶ್ ನಾಗಮಂಗಲ ಮಂಡ್ಯ
info.reporterkarnataka@gmail.com
ದೇವಾಲಯಗಳ ನಿರ್ಮಾಣದಿಂದ ಸಮಾಜದಲ್ಲಿ ಹಾಗೂ ಜೀವನದ ಉತ್ಸಾಹದ ಮನಶಾಂತಿ ದೊರಕಲು ಸಾಧ್ಯವೆಂದು ಶಾಸಕ ಸುರೇಶ ಗೌಡ ಹೇಳಿದರು .
ಅವರು ಬುಧವಾರ ನಾಗಮಂಗಲ ತಾಲೂಕಿನ ಸಂಕನಹಳ್ಳಿ ಬಸವೇಶ್ವರನಗರ ಬಳಿ ನೂತನವಾಗಿ ನಿರ್ಮಾಣ ಮಾಡಲಿರುವ ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಜೀವನದಲ್ಲಿ ದೇವಾಲಯಗಳ ನಿರ್ಮಾಣದಿಂದ ಉತ್ಸಾಹ ಹಾಗೂ ಮನಶ್ಯಾಂತಿ ದೊರಕುವುದರಲ್ಲಿ ಸಂದೇಹವಿಲ್ಲ. ಇದರಿಂದ ಬದುಕಿನಲ್ಲಿ ಸಾಧನೆ ಮಾಡುವ ಹಂಬಲ ಹಲವರಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಕಾರ್ಯಗಳು ಹೆಚ್ಚಾಗಿ ಬೆಳೆಯಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯ ಚನ್ನಪ್ಪ. ಬೋರೇಗೌಡ ಗಂಗಣ್ಣ ಅಕ್ಕಪಕ್ಕದಗ್ರಾಮಗಳ ಮುಖಂಡರುಗಳು ಹಾಜರಿದ್ದರು.