ಇತ್ತೀಚಿನ ಸುದ್ದಿ
ಕೊರೊನಾ 3ನೇ ಅಲೆ ಭೀತಿ: 18 ವರ್ಷ ಕೆಳಗಿನ ಮಕ್ಕಳಿಗೆ ಅಂಗಡಿ, ವಾಣಿಜ್ಯ ಕೇಂದ್ರಗಳ ಪ್ರವೇಶಕ್ಕೆ ನಿರ್ಬಂಧ
22/06/2021, 20:52
ಮಂಗಳೂರು(reporterkarnataka news): ಕೊರೊನಾ 3ನೇ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸಲಿದೆ ಎಂಬ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಂಗಡಿ ಮುಂಗಟ್ಟು ಮತ್ತು ಇತರ ವಾಣಿಜ್ಯ ಕಟ್ಟಡಗಳಿಗೆ ಹೋಗುವುದನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಬಂಧಿಸಿದೆ.
18 ವರ್ಷ ಕೆಳಗಿನ ಮಕ್ಕಳನ್ನು ಹೆತ್ತವರು ಅಥವಾ ಪೋಷಕರು ತಮ್ಮ ಜತೆ ಅಂಗಡಿ ಮುಂಗಟ್ಟು ಅಥವಾ ಇನ್ನಿತರ ವಾಣಿಜ್ಯ ಕೇಂದ್ರಗಳಿಗೆ ಕರೆದುಕೊಂಡು ಹೋಗುವುದಕ್ಕೆ ನಿರ್ಬಂಧ ಹೇರಲಾಗಿದೆ. ಜತೆಗೆ ಧಾರ್ಮಿಕ ಕೇಂದ್ರಗಳಿಗೆ ನಿಷೇಧ ಹಾಕಲಾಗಿದೆ.