ಇತ್ತೀಚಿನ ಸುದ್ದಿ
ಕೊರೊನಾ 3ನೇ ಅಲೆಯ ಭೀತಿ: ಅಮರನಾಥ ಯಾತ್ರೆ ರದ್ದುಗೊಳಿಸಲು ಸರಕಾರ ತೀರ್ಮಾನ
22/06/2021, 08:56
ನವದೆಹಲಿ(reporterkarnataka news): ಕೊರೊನಾ 3ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆ ರದ್ದುಗೊಳಿಸಲು ಜಮ್ಮು ಕಾಶ್ಮೀರ ಸರಕಾರ ನಿರ್ಧರಿಸಿದೆ.
ಅಮರನಾಥ ಯಾತ್ರಿಕರಿಗೆ ಇದೊಂದುಬ ಕಹಿ ಸುದ್ದಿಯಾಗಿದೆ. ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಶಿವನ ಗುಹೆ ದೇವಸ್ಥಾನಕ್ಕೆ 56 ದಿನಗಳ ಪ್ರಯಾಣವು ಜೂ.28 ರಂದು ಪಹಲ್ಗಮ್ ಮತ್ತು ಬಾಲ್ಟಾಲ್ ಮಾರ್ಗಗಳ ಮೂಲಕ ಪ್ರಾರಂಭವಾಗಿ ಆಗಸ್ಟ್ 22 ರಂದು ಕೊನೆಗೊಳ್ಳಬೇಕಿತ್ತು.