ಇತ್ತೀಚಿನ ಸುದ್ದಿ
ಎನ್ ಡಿಎ, ಯುಪಿಎಗೆ ಪರ್ಯಾಯವಾಗಿ ‘ರಾಷ್ಟ್ರ ಮಂಚ್ ‘ ರಚನೆ? 400 ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿ ಕಣಕ್ಕೆ?
22/06/2021, 20:07
ನವದೆಹಲಿ(reporterkarnataka news): ಎನ್ ಸಿಪಿ ನಾಯಕ, ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ನಿವಾಸದಲ್ಲಿ ಪ್ರತಿಪಕ್ಷದ ನಾಯಕರ ಮಹತ್ವದ ಸಭೆ ನಡೆದಿದ್ದು, ಎನ್ ಡಿಎ ಮತ್ತು ಯುಪಿಎಗೆ ಪರ್ಯಾಯವಾಗಿ ‘ರಾಷ್ಟ್ರ ಮಂಚ್ ‘ ಅಸ್ತಿತ್ವಕ್ಕೆ ತರುವ ಕುರಿತು ಚಿಂತನೆ ನಡೆಯಿತು. 2024ರ ಸಂಸತ್ ಚುನಾವಣೆಯಲ್ಲಿ 400 ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಸುವ ಬಗ್ಗೆ ಚರ್ಚಿಸಲಾಯಿತು.
ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್ ಸಲಹೆಯ ಪ್ರಕಾರ ಮುಂದಿನ ರಣತಂತ್ರ ರೂಪಿಸುವ ಬಗ್ಗೆ ಚಿಂತನೆ ನಡೆಯಿತು.