ಇತ್ತೀಚಿನ ಸುದ್ದಿ
ಯುಸುಫ್ ಅಲಿ ನೆರವಿನಿಂದ ಯುಎಇಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೃಷ್ಣನ್ ಮನೆಗೆ ವಾಪಾಸ್ !
11/06/2021, 11:26
ಕೇರಳ (reporterkarnataka.com)
ಯುಎಇಯಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಭಾರತೀಯ ಕ್ಷಮಾದಾನ ಪಡೆದು ಸ್ವದೇಶಕ್ಕೆ ವಾಪಸ್ಸಾಗಿದ್ಧಾರೆ.
ಕೇರಳ ಮೂಲದ 45 ವರ್ಷದ ಕೃಷ್ಣನ್ 2012ರಲ್ಲಿ ಯುಎಇನಲ್ಲಿ ಡ್ರೈವಿಂಗ್ ಮಾಡುವಾಗ ಅಪಘಾತದಿಂದ ಯುವಕನೊಬ್ಬ ಸಾವನ್ನಪ್ಪಿದ್ದು , ಇಷ್ಟು ವರ್ಷ ಜೈಲಿನಲ್ಲೇ ಇದ್ದ ಕೃಷ್ಣನ್ಗೆ ಯುಎಇ ಸುಪ್ರೀಂಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಇತ್ತೀಚೆಗೆ ಕೃಷ್ಣನ್ ಕುಟುಂಬದವರು ಅನಿವಾಸಿ ಭಾರತೀಯ ಉದ್ಯಮಿ ಮತ್ತು ಲುಲು ಗ್ರೂಪ್ನ ಮುಖ್ಯಸ್ಥ ಎಂ.ಎ.ಯೂಸೂಫಲಿ ಬಳಿ ಸಹಾಯ ಯಾಚಿಸಿದಾಗ ಮೃತ ಬಾಲಕನ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಿ, ಕೃಷ್ಣನ್ಗೆ ಕ್ಷಮಾದಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಗ ಕೃಷ್ಣನ್ ದೋಷ ಮುಕ್ತರಾಗಿ ತಮ್ಮ ಹುಟ್ಟೂರು ಕೇರಳಕ್ಕೆ ಆಗಮಿಸಿದ್ದಾರೆ.