ಇತ್ತೀಚಿನ ಸುದ್ದಿ
ತಾಯಿಯನ್ನೇ ಕೊಲ್ಲಲು ತಂದೆಗೆ ಸಾಥ್ ನೀಡಿದ 14ರ ಹರೆಯದ ಬಾಲಕ !
11/06/2021, 14:13
ಬಾಗಲಕೋಟೆ( reporterkarnataka.com)
ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದು, ತಾಯಿಯ ಕೊಲೆಗೆ 14 ವರ್ಷದ ಬಾಲಕ ಸಾಥ್ ಕೊಟ್ಟಿದ್ದಾನೆ.
ಚಾಲಕಿ ವ್ಯಕ್ತಿ ಗಡಿಬಿಡಿಯಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಿ ಅಂತ್ಯಕ್ರಿಯೆಯನ್ನೂ ಮಾಡಿ ಮುಗಿಸಿದ್ದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಮಹಾದೇವಿ ವಡ್ರಾಲ ( 40 ವರ್ಷ) ಕೊಲೆಯಾದ ದುರ್ದೈವಿ.
ಆಕೆಯ ಪತಿ ಹನುಮಂತ ವಡ್ರಾಲ ಹಾಗೂ 14 ವರ್ಷದ ಬಾಲಕನನ್ನು ಸಾವಳಗಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪತ್ನಿಯ ಶೀಲ ಶಂಕಿಸಿದ್ದ ಹನುಮಂತ ವಡ್ರಾಲ ರಾತ್ರಿಯ ವೇಳೆಯಲ್ಲಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ವೇಳೆಯಲ್ಲಿ ತಂದೆ ಕಾರ್ಯಕ್ಕೆ ಮಗ ಕೂಡ ಸಾಥ್ ಕೊಟ್ಟಿದ್ದಾನೆ. ಬೆಳಗಾಗುತ್ತಲೇ ಮಹಾದೇವಿ ವಡ್ರಾಲಳನ್ನು ಸುಟ್ಟು ಹಾಕಿದ್ದರು.
ಗಡಿಬಿಡಿಯಲ್ಲಿ ಅಂತ್ಯಕ್ರೀಯೆ ಮುಗಿಸಿರೋದು ಗ್ರಾಮಸ್ಥರಿಗೆ ಅನುಮಾನವನ್ನು ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ ವೇಳೆಯಲ್ಲಿ ಕೊಲೆಯ ರಹಸ್ಯ ಬಯಲಾಗಿದೆ. ಪೊಲೀಸರು ಇದೀಗ ಇಬ್ಬರನ್ನೂ ಬಂಧಿಸಿ ಸ್ಥಳ ಮಹಜರು ನಡೆಸಿದ್ದಾರೆ.