10:33 AM Wednesday24 - April 2024
ಬ್ರೇಕಿಂಗ್ ನ್ಯೂಸ್
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ… ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ ಚುನಾವಣೆ 60 ದಿನಗಳ ಕಾಲ ನಡೆಯುತ್ತಿರುವುದು ಅನುಮಾನಾಸ್ಪದ: ಮಾಜಿ ಸಿಎಂ… ಸಿದ್ದರಾಮಯ್ಯ ಸರಕಾರದಲ್ಲಿ ಬದುಕಿನ ಗ್ಯಾರಂಟಿ ಕಳೆದುಕೊಂಡ ಕನ್ನಡಿಗರು: ಶಾಸಕ ಡಾ. ವೈ ಭರತ್… ನಮ್ಮ ಕೆಲಸವೇ ಅಪಪ್ರಚಾರ ನಡೆಸುವವರಿಗೆ ತಕ್ಕ ಉತ್ತರ: ಸರಪಾಡಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ… ಗಾಳಿ ಮಳೆಗೆ ಮರ ಬಿದ್ದು ತಂಡಾದ ಪವರ್ ಲೈನ್: ವಿದ್ಯುತ್ ಶಾಕ್ ಹೊಡೆದು…

ಇತ್ತೀಚಿನ ಸುದ್ದಿ

ಹೋಮ್ ಗಾರ್ಡ್ ವರದಿಗೆ ಸಾಂದರ್ಭಿಕ ನೆಲೆಯಲ್ಲಿ ಫೋಟೋಗಳನ್ನು ಬಳಸಲಾಗಿದೆ: ಚಿತ್ರದಲ್ಲಿದ್ದವರಿಗೂ ವರದಿಗೂ ಸಂಬಂಧವಿಲ್ಲ

03/06/2021, 16:14

ಮಂಗಳೂರು(reporterkarnataka News): ‘ರಿಪೋರ್ಟರ್ ಕರ್ನಾಟಕ’ದಲ್ಲಿ ಜೂನ್  1ರಂದು ಪ್ರಕಟವಾದ ‘ವೇತನ ತಾರತಮ್ಯ: ಕೊರೊನಾ ವಾರಿಯರ್ಸ್ ಹೋಮ್ ಗಾರ್ಡ್ ಗಳ ಯಾತನೆ ಕೇಳುವರ್ಯಾರು ?’ ವರದಿಗೂ ಅದರಲ್ಲಿ ಬಳಸಲಾದ ಫೋಟೋಗಳಿಗೂ ಯಾವುದೇ ಸಂಬಂಧವಿಲ್ಲ. ಸಾಂದರ್ಭಿಕ ನೆಲೆಯಲ್ಲಿ ಫೋಟೋವನ್ನು ಬಳಸಲಾಗಿದೆ ಅಷ್ಟೇ.

ವರದಿಯಲ್ಲಿ ಇಡೀ ಕರ್ನಾಟಕದ ಹೋಮ್ ಗಾರ್ಡ್ ಗಳ ಚಿತ್ರಣ ನೀಡಲಾಗಿದೆಯೇ ಹೊರತು ಕೇವಲ ದಕ್ಷಿಣ ಕನ್ನಡ ಅಥವಾ ಮಂಗಳೂರಿನ ಹೋಮ್ ಗಾರ್ಡ್ ಗಳ ಸಮಸ್ಯೆಯಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಮ್ ಗಾರ್ಡ್ ಗಳು ವ್ಯಕ್ತಪಡಿಸಿದ ಅನಿಸಿಕೆಗಳನ್ನು ಕ್ರೋಢೀಕರಿಸಿ ವರದಿ ತಯಾರಿಸಲಾಗಿದೆ.

ಪೊಲೀಸರಂತೆ ಆಪತ್ಕಾಲದಲ್ಲಿ ಹೋಮ್ ಗಾರ್ಡ್ ಗಳು ಕೂಡ ಕಾರ್ಯನಿರ್ವಹಿಸುತ್ತಾರೆ ಎನ್ನುವುದನ್ನು ಮನದಟ್ಟ ಮಾಡಲು ಪೊಲೀಸ್ ಜತೆ ಇರುವ ಹೋಮ್ ಗಾರ್ಡ್ ಗಳ ಫೋಟೋ ಬಳಸಲಾಗಿದೆ. ಅದು ಬಿಟ್ಟು ಫೋಟೋದಲ್ಲಿರುವ ಯಾವುದೇ ಹೋಮ್ ಗಾರ್ಡ್ ಗಳು ದೂರು ನೀಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇವೆ.

– ಅಶೋಕ್ ಕಲ್ಲಡ್ಕ, ಸಂಪಾದಕರು

ಇತ್ತೀಚಿನ ಸುದ್ದಿ

ಜಾಹೀರಾತು