5:16 AM Thursday18 - April 2024
ಬ್ರೇಕಿಂಗ್ ನ್ಯೂಸ್
ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ…

ಇತ್ತೀಚಿನ ಸುದ್ದಿ

ಶಿರೂರು ಮಠಕ್ಕೆ ನೂತನ ಯತಿಗಳ ನೇಮಕ : ವಿಶ್ವ ಹಿಂದೂ ಪರಿಷತ್ ಸ್ವಾಗತ

19/05/2021, 10:56

ಮಂಗಳೂರು(reporterkarnataka news) :ಇತ್ತೀಚೆಗೆ ಉಡುಪಿ ಶಿರೂರು ಮಠಕ್ಕೆ ಉತ್ತರಾಕಾರಿಯಾಗಿ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರನ್ನು ನಿಯುಕ್ತಿಗೊಳಿಸಿರುವುದು ಸಮಾಜಕ್ಕೆ ಸಂತಸ ತಂದಿದ್ದು, ಉಡುಪಿ ಅಷ್ಟಮಠಗಳು ಉತ್ತರಾಕಾರಿಗಳ ಆಯ್ಕೆಯಲ್ಲಿ ಯೋಗ್ಯ ಮಾನದಂಡಗಳನ್ನು ರೂಪಿಸುವ ಮೂಲಕ ಮಾದರಿಯಾಗಿರುವುದು ಕೂಡಾ ಸ್ವಾಗತಾರ್ಹ ಎಂಬುದಾಗಿ ವಿಶ್ವಹಿಂದು ಪರಿಷತ್ತು ಅಭಿನಂದಿಸಿದೆ.

ಶಿರೂರು ಮಠದ ದ್ವಂದ್ವ ಮಠವಾದ ಶ್ರೀ ಸೋದೆ ವಾದಿರಾಜ ಮಠದ ಸ್ವಾಮಿಗಳಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಧಾರ್ಮಿಕ ಹಿನ್ನೆಲೆಯ ಅನಿರುದ್ಧ ಸರಳತ್ತಾಯರನ್ನು ಆಯ್ಕೆ ಮಾಡಿ ಯೋಗ್ಯ ರೀತಿಯಲ್ಲಿ ಶಾಸ್ತ್ರೋಕ್ತ  ಸನ್ಯಾಸದೀಕ್ಷೆಯ ಮೂಲಕ 

ಶ್ರೀ ವೇದವರ್ಧನ ಎಂಬ ಅಭಿನಾಮ ನೀಡಿ ಶಿರೂರು ಮಠದ ಯತಿಗಳನ್ನಾಗಿ ನೇಮಿಸಿರುವುದು ಸರ್ವರ ಪ್ರಶಂಸೆಗೆ ಕಾರಣವಾಗಿದೆ ಎಂಬುದಾಗಿ ವಿಶ್ವಹಿಂದು ಪರಿಷತ್ತಿನ ಪ್ರಾಂತ ಅಧ್ಯಕ್ಷರಾದ ಪ್ರೊ.ಎಂ.ಬಿ.ಪುರಾಣಿಕ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ .

ಇತ್ತೀಚೆಗೆ ಅಷ್ಟಮಠಗಳಿಗೆ ಹೊಸ ಶಿಷ್ಯರನ್ನು ನಿಯುಕ್ತಿಗೊಳಿಸುವಾಗ ಯೋಗ್ಯ ಮಾನದಂಡಗಳನ್ನು ಅಳವಡಿಸಿ ಸತ್ಸಂಪ್ರದಾಯಕ್ಕೆ ಮುಂದಾಗಿರುವುದು ಹಿಂದು ಸಮಾಜಕ್ಕೆ ಹೆಮ್ಮೆ  ಮತ್ತು ಅಭಿಮಾನ ಮೂಡಿಸುವ ಸಂಗತಿಯಾಗಿದೆ.ಶ್ರೀಶಿರೂರು ಮಠದ ನವಯತಿಗಳಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರಿಗೆ ವಿಶ್ವಹಿಂದು ಪರಿಷತ್ತು ಶುಭಕೋರುತ್ತದೆ. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಅವರಿಂದ ಹಿಂದು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಲಭಿಸುವಂತಾಗಲು ಶ್ರೀಕೃಷ್ಣನ ಅನುಗ್ರಹ ಇರಲೆಂದು ವಿಹಿಂಪ ಪ್ರಾರ್ಥಿಸುತ್ತದೆ ಎಂದು ಪ್ರೊ.ಪುರಾಣಿಕ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು