ಇತ್ತೀಚಿನ ಸುದ್ದಿ
ಉಜಿರೆಯಿಂದ ಕಿಡ್ನಾಪ್ ಆದ ಬಾಲಕ ಕೋಲಾರದಲ್ಲಿ ಮತ್ತೆ ತಾಯಿ ಮಡಿಲಿಗೆ
December 19, 2020, 3:41 PM

ಕೋಲಾರ(reporterkarnataka news):ಬೆಳ್ತಂಗಡಿಯ ಉಜಿರೆಯಿಂದ ಅಪಹರಣಗೊಂಡ ಬಾಲಕನನ್ನು ಕೋಲಾರದಲ್ಲಿ ಪೊಲೀಸರು ರಕ್ಷಣೆ ಮಾಡಿದ್ದು, ಬಾಲಕ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದ್ದಾನೆ.
ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ 8 ವರ್ಷದ ಬಾಲಕ ತಂದೆ-ತಾಯಿಗೆ ಒಪ್ಪಿಸಲಾಯಿತು.
ಬಾಲಕನ ಅಪಹರಿಸಿದ ಆರು ಆರೋಪಿಗಳನ್ನು ಕೋಲಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಆರೋಪಿಗಳನ್ನು ಮಂಡ್ಯದ ಗಂಗಾಧರ್, ಬೆಂಗಳೂರಿನ ಮಹೇಶ್, ಕೋಮಲ್ ಮತ್ತು ಸ್ಥಳೀಯ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ.
ಕೋಲಾರ ಎಸ್ ಪಿ ಕಾರ್ತಿಕ್ ರೆಡ್ಡಿ ನೇತೃತ್ವದ ವಿಶೇಷ ತಂಡ ಮಗುವನ್ನು ರಕ್ಷಿಸಿದೆ. ಡಿಸೆಂಬರ್ 17ರಂದು ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಮಗುವನ್ನು ಅಪಹರಿಸಲಾಗಿತ್ತು.