ಇತ್ತೀಚಿನ ಸುದ್ದಿ
ಕಾಶೀ ಮಠದಲ್ಲಿ ಭಕ್ತಿ, ಶ್ರದ್ದೆಯ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ: ದೇವರಿಗೆ ವಿಶೇಷ ಅಲಂಕಾರ
August 12, 2020, 10:13 AM

ಮಂಗಳೂರು(reporterkarnataka news): ಚಿತ್ರ : ಮಂಜು ನೀರೇಶ್ವಾಲ್ಯ
ಚಾಂದ್ರಮಾನ ಮಾಸದ ಕ್ರಮದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಶ್ರೀ ಕೃಷ್ಣಾಷ್ಟಮಿಯನ್ನು ಮಂಗಳವಾರ ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು.

ಕೊಂಚಾಡಿ ಕಾಶೀ ಮಠದಲ್ಲಿ ಕಾಶೀ ಮಠಾಧೀಶ ರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀ ಸಂಸ್ಥಾನದಲ್ಲಿ ಆರಾಧಿಸಲ್ಪಡುವ ಶ್ರೀಕೃಷ್ಣದೇವರಿಗೆ ವಿಶೇಷ ಅಲಂಕಾರ ಮಾಡಿದರು.

ಮಧ್ಯಾಹ್ನ ಪೂಜೆಯ ಬಳಿಕ ಶ್ರೀ ದೇವರಿಗೆ ಪಂಚಾಮೃತ , ಪವಮಾನ ಅಭಿಷೇಕ ತದನಂತರ ಮಹಾಪೂಜೆ ನೆರವೇರಿಸಿದರು. ರಾತ್ರಿ 12:೦4 ರ ಶುಭ ಮುಹೂರ್ತದಲ್ಲಿ ” ಅರ್ಘ್ಯ ” ಪ್ರದಾನವು ಶ್ರೀಗಳವರ ಅಮೃತ ಹಸ್ತಗಳಿಂದ ನೆರವೇರಿತು .

ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಕೃಷ್ಣಾಷ್ಟಮಿ ಆಚರಣೆಗೆ ಅವಕಾಶ ಇಲ್ಲದ ಕಾರಣ ಬಹುತೇಕ ಮನೆಗಳಲ್ಲಿಯೇ ಆಚರಣೆ ನಡೆಯಿತು. ಭಜಕರಿಗೆ ಪಾಲ್ಗೊಳ್ಳುವ ಅವಕಾಶವಿರಲಿಲ್ಲ .