ಇತ್ತೀಚಿನ ಸುದ್ದಿ
ಸಂಘನಿಕೇತನದ 5 ದಿನಗಳ ಗಣೇಶೋತ್ಸವ ಸಮಾಪನ
August 26, 2020, 2:58 PM

ಚಿತ್ರ : ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka news) : ನಗರದ ಮಣ್ಣಗುಡ್ಡೆ ಸಮೀಪದ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ನಡೆದ ೭೩ ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಂದು ಸಮಾಪನಗೊಂಡಿತು .
ಕೊರೊನಾ ಮಹಾಮಾರಿಯ ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಬಾರಿ ಅತೀ ಸರಳ ರೀತಿಯಲ್ಲಿ 5 ದಿನಗಳ ಕಾಲ ಗಣೇಶೋತ್ಸವ ಆಚರಿಸಲ್ಪಟ್ಟಿತು . ಈ ಬಾರಿ ಶೋಭಾಯಾತ್ರೆ ನಡೆಯಲಿಲ್ಲ. ಶ್ರೀ ಮಹಾ ಗಣಪತಿ ದೇವರ ವಿಗ್ರಹವನ್ನು ಕಾರ್ಯಕರ್ತರು ಭುಜ ಸೇವೆಯ ಮುಖಾಂತರ ರಥಬೀದಿಯಲ್ಲಿರುವ ಮಹಾಮಾಯ ತೀರ್ಥದಲ್ಲಿ ಜಲ ಸ್ತಂಭನ ಗೊಳಿಸಲಾಯಿತು .

ಬೆಳಗ್ಗೆ ಪೂಜೆ, ಮಧ್ಯಾಹ್ನ ಮಹಾ ಪೂಜೆ ಬಳಿಕ ವಿಸರ್ಜನಾ ಮಂಗಳಾರತಿ ನಡೆದ ನಂತರ ಶ್ರೀ ದೇವರ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಬಳಿಕ ಜಲ ಸ್ತಂಭನಗೊಳಿಸಲಾಯಿತು .