ಇತ್ತೀಚಿನ ಸುದ್ದಿ
ರಾತ್ರಿಯಾಗುತ್ತಿದ್ದಂತೆ ಕಡಲ ಕಿನಾರೆ ನೀರು ತಿರುಗುತ್ತೇ ನೀಲ ಬಣ್ಣಕ್ಕೆ: ಏನಿದು ಕೌತುಕ ? ನೋಡಲು ಜನಸಾಗರ
November 23, 2020, 7:45 PM

ಚಿತ್ರ: ಮಂಜು ನಿರೇಶ್ವಾಲ್ಯ
ಮಂಗಳೂರು(reporterkarnataka news): ಸುರತ್ಕಲ್ ಕಡಲ ಕಿನಾರೆ ರಾತ್ರಿಯಾದ ಬಳಿಕ ನೀಲ ಬಣ್ಣದಿಂದ ಕಂಗೊಳಿಸುತ್ತಿದ್ದು, ಈ ಕೌತಕವನ್ನು ನೋಡಲು ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ.
ದಿನದ ಇಳಿಹೊತ್ತಿನ ಬಳಿಕ ಸಮುದ್ರ ಕಿನಾರೆಯ ಜಲರಾಶಿ ನೀಲಬಣ್ಣಕ್ಕೆ ತಿರುಗುತ್ತದೆ. ಪ್ರತಿಫಲನವಾಗುವ ರೀತಿಯಲ್ಲಿ ನೀಲ ಜಲರಾಶಿ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಇದು ಪ್ರಕೃತಿ ವೈಚಿತ್ರವೇ ಅಥವಾ ಮಾನವ ನಿರ್ಮಿತ ಅಪರಾಧವೇ ಎಂಬ ಜಿಜ್ಞಾಸೆ ಪ್ರಜ್ಞಾವಂತರಲ್ಲಿ ಹುಟ್ಟಿಕೊಂಡಿದೆ. ವಿಜ್ಞಾನಿ ಡಾ. ಸಂತೋಷ್ ಕುಮಾರ್, ಫೆಸಿಫಿಕ್ ಓಶಿಯನ್ ನಲ್ಲಿ ಆಗಿರುವ ಏರಿಳಿತದ ಪ್ರಭಾವ ಜಗತ್ತಿನ ಅನೇಕ ರಾಷ್ಟ್ರಗಳ ಸಮುದ್ರ ಕಿನಾರೆಯ ಮೇಲಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ. ಇನ್ನೊಂದು ಕಡೆ ಮನುಷ್ಯ ಪ್ರಕೃತಿಯ ಮೇಲೆ ನಡೆಸಿದ ದೌರ್ಜನ್ಯದ ಫಲವೂ ಇದಾಗಿರಬಹುದು ಎಂದು ಅವರು ಹೇಳುತ್ತಾರೆ. ಸಮುದ್ರಕ್ಕೆ ಸೇರಿಕೊಂಡ ಕೆಮಿಕಲ್ ಅಪ್ಲಯನ್ಸ್ ನಿಂದ ಇದು ಸಂಭವಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ.