ಇತ್ತೀಚಿನ ಸುದ್ದಿ
ಆರ್. ಆರ್. ನಗರ: ಮುನಿರತ್ನ ಪರ ನಟ ದರ್ಶನ್ ಪ್ರಚಾರ, ಅಭಿಮಾನಿಗಳ ಮಹಾಪೂರ
October 30, 2020, 12:50 PM

ಬೆಂಗಳೂರು(reporterkarnataka news): ಆರ್ ಆರ್ ನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ಬಿರುಸಿನ ಪ್ರಚಾರ ನಡೆಸಿದರು . ದರ್ಶನ್ ಅವರನ್ನು ನೋಡಲು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.
ಮುನಿರತ್ನ ಪರ ಪ್ರಚಾರಕ್ಕೆ ಬಂದಿರುವುದನ್ನು ನಟ ದರ್ಶನ್ ಇದೇ ಸಂದರ್ಭದಲ್ಲಿ ಸಮರ್ಥಿಸಿಕೊಂಡರು. ಉತ್ತಮ ಸ್ನೇಹಿತನಾಗಿ ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳಿದರು. ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಮಂದಿಗೆ ಮುನಿರತ್ನ ಅವರು ಅನ್ನ ದಾಸೋಹ ಮಾಡಿದ್ದರು ಎಂದು ದರ್ಶನ್ ಹೇಳಿದರು.