ಇತ್ತೀಚಿನ ಸುದ್ದಿ
ಮತಗಟ್ಟೆಗೆ ತೆರಳುವಾಗ ಮಾಸ್ಕ್ ಮರೆತ ಶಾಸಕರು: ಹಾಗಾದರೆ ಆ ಜನಪ್ರತಿನಿಧಿ ಯಾರು? ನೀವೇ ನೋಡಿ
December 27, 2020, 6:40 PM

ಬೈಂದೂರು(reporterkarnataka news): ವೇದಿಕೆ ಸಿಕ್ಕಾಗೆಲ್ಲ ಮಾಸ್ಕ್ ಹಾಕಲು ಜನಸಾಮಾನ್ಯರಿಗೆ ಬುದ್ಧಿವಾದ ಹೇಳುವ ಶಾಸಕರೇ ಮಾಸ್ಕ್ ಹಾಕದಿದ್ದರೆ ಹೇಗೆ. ಇಂತಹದೊಂದು ಜಿಜ್ಞಾಸೆ ಆರಂಭವಾಗಿದೆ. ಕಾರಣ ಇಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಲು ಬಂದ ಶಾಸಕರೊಬ್ಬರು ಮಾಸ್ಕ್ ಮರೆತುಬಿಟ್ಟು ಬಂದಿದ್ದಾರೆ. ಆದರೆ ಇದನ್ನು ಪ್ರಶ್ನಿಸುವ ಧೈರ್ಯ ಅಲ್ಲಿದ್ದ ಯಾವುದೇ ಅಧಿಕಾರಗಳಲ್ಲಿ ಇಲ್ಲದಿರುವುದು ದೌಭಾರ್ಗ್ಯ.
ಮತದಾನ ಮಾಡುವ ವೇಳೆ ಮಾಸ್ಕ್ ಮರೆತು ಬಂದವರು
ಬೇರೆ ಯಾರೂ ಅಲ್ಲ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರು. ಸುಕುಮಾರ ಶೆಟ್ಟಿ ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದ ಮೂಡಮುಂದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಆದರೆ ಮಾಸ್ಕ್ ಮಾತ್ರ ಮರೆತಿದ್ದಾರೆ. ಅದಿರಲಿ. ಬಾಯಿಗೆ ಕರ್ಚೀಫ್ ಕಟ್ಟುವ ಪ್ರಯತ್ನವನ್ನೂ ಮಾಡಿಲ್ಲ.