ಇತ್ತೀಚಿನ ಸುದ್ದಿ
ಲಿಂಗಸುಗೂರು: ಬುದ್ದ, ಬಸವಣ್ಣ, ಅಂಬೇಡ್ಕರ್ ಭಾವಚಿತ್ರದ ಕ್ಯಾಲೆಂಡರ್ ಬಿಡುಗಡೆ
December 30, 2020, 8:14 PM

ಲಿಂಗಸುಗೂರು(reporterkarnataka news): ಸಾರ್ವಜನಿಕರಿಗೆ ಮಾರ್ಗದರ್ಶಕರಾಗಿ, ಯುವ ಪೀಳಿಗೆಗೆ ಉತ್ತಮ ಜೀವನ ನಡೆಸಲು ಒಳ್ಳೆಯ ತಿಳಿ ಹೇಳಿಕೊಡುವವರೇ ಹಿರಿಯರು. ವೃತ್ತಿ ಬದುಕಿನ ಹೊರಗೂ ಮಾಡಲು ಬೇಕಾದಷ್ಟಿದೆ ಎನ್ನುವ ಗಟ್ಟಿತನ ತೋರಿದರೆ ನಿವೃತ್ತಿಯ ಕೊರಗು ಆವರಿಸದು ಎಂದು ಲಿಂಗಸುಗೂರು ಶಾಸಕ ಡಿ.ಎಸ್. ಹುಲಿಗೇರಿ ಅಭಿಪ್ರಾಯಪಟ್ಟರು. ಪಟ್ಟಣದ ಶಾಸಕರ ಕಾರ್ಯಾಲಯದ ಆವರಣದಲ್ಲಿ ಪರಶುರಾಮ್ ಕಾಟಪ್ಪ ಹೊಸಮನಿ ಸಂಪಾದಕರು ಅವರ ಹಮ್ ಭೀಮ ಗೋಷ್ಠಿ ದಿನಪತ್ರಿಕೆಯ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ರವರ ಭಾವಚಿತ್ರವಿರುವ 2021ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಮಾಜಿ ಜಿಲ್ಲಾ ಪಂಚಾಯಿತ್ಅಧ್ಯಕ್ಷ ಪಾಮಯ್ಯ ಮುರಾರಿ, ವಿ. ಚನ್ನಪ್ಪ ಗೌಡ, ಪರಶುರಾಮ್ ನಗನೂರು. ಅಮರೇಶ್ ಗುತ್ತಿಗೆದಾರರು, ಪ್ರಶಾಂತ್ ಕರಡಕಲ್ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.