ಇತ್ತೀಚಿನ ಸುದ್ದಿ
ಲಂಚ ನೀಡದಿದ್ದರೆ ಸಿಗೊಲ್ಲ ಭೂ ದಾಖಲೆ: ಅಧಿಕಾರಿಗಳ ಭ್ರಷ್ಟಾಚಾರದಿಂದ ರೈತರಿಗೆ ಸಂಕಷ್ಟ
November 23, 2020, 5:15 PM

ಅಮರೇಶ್ ರಾಯಚೂರು
info.reporterkarnataka@gmail.com
ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಭೂದಾಖಲೆಗಳ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಯಚೂರು
ಜಿಲ್ಲಾ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂ ದಾಖಲೆಗಳ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಭೂ ದಾಖಲೆ ಪಡೆಯಲು ಮುಗ್ಧ ರೈತರಿಂದ ಲಂಚ ಪಡೆಯಲಾಗುತ್ತಿದೆ. ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಪಡೆದಿದ್ದಾರೆ. ರೈತರು ಜಮೀನಿನ ದಾಖಲೆಗಳನ್ನು ಪಡೆಯಲು ಲಂಚ ನೀಡಬೇಕು. ಲಂಚವಿಲ್ಲದೆ ಯಾವುದೇ ದಾಖಲೆಗಳು ಸಿಗುವುದಿಲ್ಲ. ಟಿಪ್ಪಣಿ ಮ್ಯಾಪ್, ಆಕಾರಬಂದ. ಗ್ರಾಮ ನಕಾಶ. ಫಾರ್ಮ್ ನಂಬರ್ ೧೦ ಇತ್ಯಾದಿಗಳು ಪಡೆಯಲು ನಿಗದಿತ ಶುಲ್ಕವಿರುತ್ತದೆ. ಆದರೆ ಇಲ್ಲಿನ ಅಧಿಕಾರಿಗಳು ದಾಖಲೆಗಳನ್ನು ಪಡೆಯಲು ರೈತರಿಗೆ ಸಾವಿರಾರು ರೂಪಾಯಿ ಹಣವನ್ನು ಲಂಚದ ರೂಪದಲ್ಲಿ ಪಡೆಯುತ್ತಿದ್ದಾರೆ. ಹಣ ನೀಡದಿದ್ದಲ್ಲಿ ಹಿಸಾ ನಕಾಶೆ, ಆಕರ ಬಂದ, ಗ್ರಾಮ ನಕಾಶ ಮುಂತಾದ ದಾಖಲೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಶಿವಣ್ಣ ಪರಂಗಿ, ಕಸಬಾಲಿಂಗಸುಗೂರು ಮತ್ತು ಹುಲಗಪ್ಪ ಕೆಸರಟ್ಟಿ, ರಮೇಶ್ ಗೋಸ್ಲ, ಪ್ರೇಮ ಜೀವಿ ಗೊರೆಬಾಳ್,
ಕೃಷ್ಣ ಆನೆಹೊಸೂರು ಉಪಸ್ಥಿತರಿದ್ದರು.