ಇತ್ತೀಚಿನ ಸುದ್ದಿ
ಸಂಡೇ ಲಾಕ್ ಡೌನ್ ಸದ್ಯಕ್ಕೆ ಮುಗಿಯೊಲ್ಲ, ಆಗಸ್ಟ್ ವರೆಗೆ ಮುಂದುವರಿಯಲಿದೆ!
July 26, 2020, 2:48 PM

ಬೆಂಗಳೂರು(reporterkarnataka news): ಸಂಡೇ ಲಾಕ್ ಡೌನ್ ಮುಗಿಯಿತು ಅಂದು ಕೊಂಡವರಿಗೆ ರಾಜ್ಯ ಸರಕಾರ ಮತ್ತೆ ಶಾಕ್ ನೀಡಲಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಂಡೇ ಲಾಕ್ ಡೌನ್ ಮುಂದುವರಿಯಲಿದೆ. ಆಗಸ್ಟ್ ಅಂತ್ಯದವರೆಗೆ ವಿಸ್ತರಣೆಗೊಳ್ಳಲಿದೆ.
ರಾಜ್ಯ ಸರಕಾರದ ಪ್ರಸಕ್ತ ಆದೇಶದ ಪ್ರಕಾರ ಜುಲೈ 31ರ ವರೆಗೆ ಸಂಡೇ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಜುಲೈ 26 ಈ ತಿಂಗಳ ಕೊನೆಯ ಭಾನುವಾರ ಆಗಿದೆ. ಹಾಗಾಗಿ ಇನ್ನು ಮುಂದೆ ಭಾನುವಾರ ದಿನ ಲಾಕ್ ಡೌನ್ ಇರದು ಎಂದು ರಾಜ್ಯದ ಜನತೆ ಯೋಚಿಸಲಾರಂಭಿಸಿದ್ದಾರೆ. ಆದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಭಾನುವಾರದ ಲಾಕ್ ಡೌನ್ ಆಗಸ್ಟ್ ತಿಂಗಳ ಅಂತ್ಯದವರೆಗೆ ಮುಂದುವರಿಯಲಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ವಿಪತ್ತು ಪರಿಹಾರ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಜತೆ ಚರ್ಚ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಬಹುತೇಕ ಕಡೆ ಜನರು ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸಿ ಕೊರೊನಾ ನಿರ್ಮೂಲನಕ್ಕೆ ಸಹಕರಿಸಿದರು.